AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Guru Purnima

Guru Purnima

ಆಷಾಢ ಮಾಸದ ಪವಿತ್ರ ಹುಣ್ಣಿಮೆಯಂದು ಆಚರಿಸಲಾಗುವ ಗುರು ಪೂರ್ಣಿಮೆಯು ಭಾರತೀಯ ಸನಾತನ ಪರಂಪರೆ ಹಾಗೂ ಆಧ್ಯಾತ್ಮಿಕ ಚಿಂತನೆಯಲ್ಲಿ ಅತ್ಯಂತ ಶ್ರೇಷ್ಠವಾದ ಪರ್ವದಿನವಾಗಿದೆ. ‘ಗು’ ಎಂದರೆ ಅಜ್ಞಾನವೆಂಬ ಅಂಧಕಾರ, ‘ರು’ ಎಂದರೆ ಅದನ್ನು ನಿವಾರಿಸುವ ಪ್ರಕಾಶ. ನಮ್ಮಲ್ಲಿರುವ ತಮಸ್ಸನ್ನು ಕಳೆದು ಜ್ಞಾನದ ಬೆಳಕಿನತ್ತ ಮುನ್ನಡೆಸುವ, ಬದುಕಿಗೆ ಸರಿಯಾದ ದಾರಿ ತೋರಿಸುವ ಮಹಾನ್ ಚೇತನಗಳಿಗೆ ಹಾಗೂ ಗುರು ತತ್ತ್ವಕ್ಕೆ ಕೃತಜ್ಞತೆ ಸಲ್ಲಿಸುವ ಶುಭ ದಿನವೇ ಈ ಗುರು ಪೂರ್ಣಿಮೆ. ಆಧ್ಯಾತ್ಮಿಕ ದೃಷ್ಟಿಕೋನದಲ್ಲಿ ಗುರು ಎಂದರೆ ಕೇವಲ ಭೌತಿಕ ವ್ಯಕ್ತಿಯಲ್ಲ, ಅದೊಂದು ದಿವ್ಯ ಸತ್ಯ ಮತ್ತು ಸಾಧಕನನ್ನು ಅಜ್ಞಾನದ ಬಂಧನದಿಂದ ಮುಕ್ತಗೊಳಿಸಿ ಆತ್ಮಸಾಕ್ಷಾತ್ಕಾರದತ್ತ ಒಯ್ಯುವ ಪವಿತ್ರ ಶಕ್ತಿ.

ಇನ್ನೂ ಹೆಚ್ಚು ಓದಿ

ಗುರು ಪೂರ್ಣಿಮೆ ಶುಭಾಶಯ ಕೋರಿದ ಪ್ರಧಾನಿ ಮೋದಿ: ಸಂಸ್ಕೃತ ಸುಭಾಷಿತ ಹಂಚಿಕೊಂಡ ಪ್ರಧಾನಿ

ಗುರು ಪೂರ್ಣಿಮೆಯ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದೇಶದ ಸಮಸ್ತ ಜನತೆಗೆ ಶುಭ ಹಾರೈಸಿದ್ದಾರೆ. ಗುರುಗಳು ಕೇವಲ ಅಕ್ಷರ ಜ್ಞಾನವನ್ನು ನೀಡುವುದು ಮಾತ್ರವಲ್ಲದೆ, ತಮ್ಮ ಶಿಷ್ಯರಲ್ಲಿ ಸಕಾರಾತ್ಮಕ ಶಕ್ತಿ ತುಂಬಿ, ಉದಾತ್ತ ಚಿಂತನೆ ಮತ್ತು ಮೌಲ್ಯಗಳ ಮೂಲಕ ಅವರನ್ನು ನೈಜ ವ್ಯಕ್ತಿಗಳನ್ನಾಗಿ ರೂಪಿಸುತ್ತಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಗುರುಗಳು ತೋರಿದ ಉನ್ನತ ಆದರ್ಶಗಳು ಹಾಗೂ ಮಾರ್ಗದರ್ಶನವನ್ನು ಪ್ರತಿಯೊಬ್ಬರೂ ತಮ್ಮ ಜೀವನದ ದಿಕ್ಸೂಚಿಯನ್ನಾಗಿ ಮಾಡಿಕೊಳ್ಳಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, ಗುರುವಿನ ಮಹತ್ವವನ್ನು ಸಾರುವ ಸುಂದರ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿದ್ದಾರೆ.

ಗುರು ಪೂರ್ಣಿಮೆ 2026: ಮಲ್ಲೇಶ್ವರಂ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆ

Guru Purnima 2026: ಗುರು ಪೂರ್ಣಿಮೆ 2026ರ ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂ ಸಾಯಿಬಾಬಾ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು, ಅಲಂಕಾರ, ಅಭಿಷೇಕ, ಗುರು ಪೂಜೆ ಹಾಗೂ ಪಾದ ಪೂಜೆ ಕಾರ್ಯಕ್ರಮಗಳು ನಡೆದಿವೆ. ಜ್ಞಾನದ ಕಡೆಗೆ ಮಾರ್ಗದರ್ಶನ ನೀಡುವ ಗುರುಗಳಿಗೆ ನಮನ ಸಲ್ಲಿಸಲು ಅಪಾರ ಸಂಖ್ಯೆಯ ಭಕ್ತರು ಸಾಯಿಬಾಬಾ ದರ್ಶನ ಪಡೆದು ಆಶೀರ್ವಾದ ಪಡೆಯುತ್ತಿದ್ದಾರೆ.

Guru Purnima 2026: ಗುರು ಪೂರ್ಣಿಮೆಯಂದು ಗುರುವಿಗೆ ನೀಡಬಹುದಾದ ಅತ್ಯುತ್ತಮ ಉಡುಗೊರೆಗಳಿವು

ಗುರು ಪೂರ್ಣಿಮೆಯನ್ನು ವ್ಯಾಸ ಪೌರ್ಣಮಿ ಎಂದೂ ಆಚರಿಸಲಾಗುತ್ತದೆ. ಈ ದಿನದಂದು ಮಹರ್ಷಿ ವೇದವ್ಯಾಸರ ಜನ್ಮದಿನ. ಗುರುವಿನ ಮಹತ್ವವನ್ನು ಸಾರುವ ಈ ಪವಿತ್ರ ದಿನದಂದು ಶಿಷ್ಯರು ತಮ್ಮ ಗುರುಗಳಿಗೆ ಗೌರವ ಸಲ್ಲಿಸಿ, ಆಶೀರ್ವಾದ ಪಡೆಯುತ್ತಾರೆ. ಹೊಸ ವಸ್ತ್ರಗಳು, ಧಾರ್ಮಿಕ ಗ್ರಂಥಗಳು, ಹಳದಿ ಬಣ್ಣದ ವಸ್ತುಗಳು, ಪೆನ್-ಡೈರಿಯಂತಹ ಶ್ರೇಷ್ಠ ಉಡುಗೊರೆಗಳನ್ನು ನೀಡಿ, ಅವರ ಜ್ಞಾನಸೇವೆಗೆ ಕೃತಜ್ಞತೆ ಸಲ್ಲಿಸಬಹುದು. ನಿಜವಾದ ಗೌರವವೇ ಶ್ರೇಷ್ಠ ಗುರುದಕ್ಷಿಣೆ.

Guru Purnima 2026: ಇಂದು ಸಂಜೆ ಮನೆಯ ಈ ಜಾಗಗಳಲ್ಲಿ ತುಪ್ಪದ ದೀಪ ಹಚ್ಚಿ, ಸಿಗಲಿದೆ ಲಕ್ಷ್ಮಿ ದೇವಿ ಕೃಪೆ!

ಗುರು ಪೂರ್ಣಿಮೆಯು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರ ದಿನ. ಈ ಶುಭ ದಿನದಂದು ಮನೆಯ ಪೂಜಾ ಮಂದಿರ, ತುಳಸಿ ಗಿಡ, ಮುಖ್ಯ ದ್ವಾರ, ಅರಳಿ ಮರ ಹಾಗೂ ಅಡುಗೆಮನೆಯಂತಹ 6 ನಿರ್ದಿಷ್ಟ ಸ್ಥಳಗಳಲ್ಲಿ ಹಸುವಿನ ತುಪ್ಪದ ದೀಪ ಬೆಳಗಿಸುವುದರಿಂದ ಲಕ್ಷ್ಮಿ ದೇವಿಯ ಕೃಪೆಗೆ ಪಾತ್ರರಾಗಿ, ಮನೆಯಲ್ಲಿ ನೆಮ್ಮದಿ, ಯಶಸ್ಸು ಹಾಗೂ ಅಷ್ಟೈಶ್ವರ್ಯಗಳು ನಿರಂತರವಾಗಿ ನೆಲೆಸುತ್ತವೆ ಎಂಬ ನಂಬಿಕೆಯಿದೆ.

Guru Purnima 2026: ಗುರು ಪೂರ್ಣಿಮೆಯಂದು ಮಾಡಬೇಕಾದ ಶುಭ ಕಾರ್ಯಗಳಿವು

ಗುರು ಪೂರ್ಣಿಮೆಯು ಹಿಂದೂ ಧರ್ಮದಲ್ಲಿ ಗುರುಗಳಿಗೆ ಕೃತಜ್ಞತೆ ಸಲ್ಲಿಸುವ ಪವಿತ್ರ ದಿನವಾಗಿದೆ. ಇದು ಜ್ಞಾನದ ಬೆಳಕನ್ನು ನೀಡಿ, ಜೀವನದ ಅಂಧಕಾರವನ್ನು ಹೋಗಲಾಡಿಸುತ್ತದೆ. ಈ ಶುಭದಿನದಂದು ಗುರುಗಳನ್ನು ಪೂಜಿಸುವುದು, ದಾನ ಮಾಡುವುದು, ಮಂತ್ರ ಜಪಿಸುವುದು ಸೇರಿದಂತೆ 7 ಶ್ರೇಷ್ಠ ಕಾರ್ಯಗಳನ್ನು ಮಾಡುವುದರಿಂದ ಜ್ಞಾನ, ಯಶಸ್ಸು, ಸಮೃದ್ಧಿ ಮತ್ತು ಮನಃಶಾಂತಿ ದೊರೆಯುತ್ತದೆ ಎಂದು ನಂಬಲಾಗಿದೆ.

ಗುರು ಪೂರ್ಣಿಮಾ ವಿಶೇಷ: ಅಜ್ಞಾನದಿಂದ ಜ್ಞಾನದತ್ತ, ಪ್ರತಿಯೊಬ್ಬರ ಜೀವನದಲ್ಲಿ ಗುರು ಏಕೆ ಮುಖ್ಯ?

Guru Purnima 2026: ಗುರು ಪೂರ್ಣಿಮಾ ಗುರುಗಳ ಮಹತ್ವವನ್ನು ಸಾರುವ ಹಬ್ಬ. ಜೀವನದ ಕತ್ತಲೆಯನ್ನು ಓಡಿಸಿ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುವ ದಿವ್ಯ ಚೇತನವೇ ಗುರು. ಬದುಕಿನ ಸಂಕಷ್ಟಗಳಲ್ಲಿ ದಿಕ್ಸೂಚಿಯಾಗಿ, ಅಹಂಕಾರವನ್ನು ಕಳೆದು ನಮ್ಮ ನಿಜವಾದ ಆತ್ಮ ಸ್ವರೂಪವನ್ನು ಅರಿಯಲು ಗುರುಗಳ ಮಾರ್ಗದರ್ಶನ ಅತಿ ಅವಶ್ಯಕ. ಈ ಶುಭದಿನದಂದು ಜ್ಞಾನದ ಬೆಳಕು ನೀಡಿದ ಸಕಲ ಗುರುಪರಂಪರೆಗೆ ನಮನ.

Guru Purnima 2026: ಇಂದು ಗುರು ಪೂರ್ಣಿಮೆಯ ವಿಶೇಷ ದಿನ, ಏನಿದರ ವಿಶೇಷತೆ?

ಆಷಾಢ ಹುಣ್ಣಿಮೆಯಂದು ಆಚರಿಸಲಾಗುವ ಗುರು ಪೂರ್ಣಿಮೆಯು ಸನಾತನ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠ ಹಾಗೂ ಪವಿತ್ರ ದಿನವಾಗಿದೆ. ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ತೋರುವ ಗುರುಗಳಿಗೆ ಗೌರವ ಸಲ್ಲಿಸುವ ಈ ಪರ್ವದಿನದ ನೈಜ ಅರ್ಥ, ಮಹರ್ಷಿ ವೇದವ್ಯಾಸರ ಜನ್ಮದಿನದ ಪೌರಾಣಿಕ ಇತಿಹಾಸ ಹಾಗೂ ಈ ದಿನದ ಆಧ್ಯಾತ್ಮಿಕ ವಿಶೇಷತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ಇಂದು ಗುರು ಪೂರ್ಣಿಮೆ ಶುಭ ದಿನ: ಮೇಷಾದಿ 12 ರಾಶಿಗಳ ದಿನ ಭವಿಷ್ಯ

ಜುಲೈ 29, 2026ರ ಗುರು ಪೂರ್ಣಿಮಾ ವಿಶೇಷ ದಿನದಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ದ್ವಾದಶ ರಾಶಿಗಳ ದಿನಭವಿಷ್ಯವನ್ನು ವಿವರಿಸಿದ್ದಾರೆ. ಆಷಾಢ ಪೂರ್ಣಿಮಾ, ವ್ಯಾಸ ಪೂರ್ಣಿಮಾ ಎಂದೂ ಕರೆಯಲ್ಪಡುವ ಈ ಪವಿತ್ರ ದಿನದ ಮಹತ್ವ, ಗುರು ಸೇವೆಯ ಪ್ರಾಮುಖ್ಯತೆ ಮತ್ತು ಗ್ರಹಗಳ ಸ್ಥಾನದ ಆಧಾರದ ಮೇಲೆ ಪ್ರತಿ ರಾಶಿಚಕ್ರದ ಚಿಹ್ನೆಗೆ ನಿರ್ದಿಷ್ಟ ಫಲಗಳನ್ನು ವಿವರಿಸಿದ್ದಾರೆ.

ಗುರು ಪೂರ್ಣಿಮೆಯಂದು ಶ್ರೀ ರಾಘವೇಂದ್ರ ಸ್ವಾಮಿಗಳ ಪೂಜೆ ಏಕೆ ಶ್ರೇಷ್ಠ?

ಗುರು ಪೂರ್ಣಿಮೆಯಂದು (ವ್ಯಾಸ ಪೂರ್ಣಿಮೆ) ಗುರುವಿಗೆ ವಿಶೇಷ ಸ್ಥಾನವಿದೆ. ಈ ಪವಿತ್ರ ದಿನದಂದು ಶ್ರೀ ರಾಘವೇಂದ್ರ ಸ್ವಾಮಿಗಳ (ರಾಯರ) ಪೂಜೆ ಅತ್ಯಂತ ಫಲಪ್ರದ. ರಾಯರನ್ನು ಭಕ್ತಿಯಿಂದ ಪೂಜಿಸುವುದರಿಂದ ಜ್ಞಾನ, ಕುಟುಂಬದಲ್ಲಿ ಸಮೃದ್ಧಿ, ಶಾಂತಿ ಮತ್ತು ಸಕಲ ಕಷ್ಟಗಳು ನಿವಾರಣೆಯಾಗುತ್ತವೆ. ಸರಳ ಪೂಜಾ ವಿಧಾನಗಳನ್ನು ಅನುಸರಿಸಿ, ರಾಯರ ಕೃಪಾ ಕಟಾಕ್ಷಕ್ಕೆ ಪಾತ್ರರಾಗಿ ಪುನೀತಗೊಳ್ಳಿ.

Guru Purnima 2026: ಇಂದು ಗುರು ಪೂರ್ಣಿಮೆ; ಜಾತಕದಲ್ಲಿ ಗುರು ಬಲ ಹೆಚ್ಚಿಸಲು ಈ ರೀತಿ ಮಾಡಿ

ನಿಮ್ಮ ಜನ್ಮ ಕುಂಡಲಿಯಲ್ಲಿ ಗುರು ಗ್ರಹವು ದುರ್ಬಲವಾಗಿದ್ದು, ಉದ್ಯೋಗ, ಹಣಕಾಸಿನ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಗುರು ಪೂರ್ಣಿಮೆಯಂದು ಪರಿಹಾರವನ್ನು ಮಾಡುವುದು ಶುಭ. ಆರ್ಥಿಕ ಸ್ಥಿರತೆಗಾಗಿ ಶ್ರೀ ವಿಷ್ಣು ಪೂಜೆ, 'ಓಂ ಬೃಂ ಬೃಹಸ್ಪತೇ ನಮಃ' ಮಂತ್ರ ಜಪ, ಸತ್ಯನಾರಾಯಣ ವ್ರತ ಹಾಗೂ ಚಂದ್ರನಿಗೆ ಅರ್ಘ್ಯ ಅರ್ಪಿಸಿ. ಜೀವನದಲ್ಲಿ ಸೌಭಾಗ್ಯ ಮತ್ತು ಸಮೃದ್ಧಿ ಪಡೆಯಿರಿ.

ಇಂದು ಸಂಜೆ ಇಶಾ ಯೋಗ ಕೇಂದ್ರದಲ್ಲಿ ಗುರು ಪೂರ್ಣಿಮೆ ಸಂಭ್ರಮ; ಸದ್ಗುರು ಜೊತೆ ವಿಶೇಷ ಸತ್ಸಂಗ

ಕೊಯಮತ್ತೂರಿನ ಇಶಾ ಯೋಗ ಕೇಂದ್ರವು ಗುರು ಪೂರ್ಣಿಮೆಯ ಸಂದರ್ಭವಾದ ಇಂದು ಸಂಜೆ ಅದ್ದೂರಿಯಾದ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ಸದ್ಗುರುಗಳೊಂದಿಗೆ ವಿಶೇಷ ಸತ್ಸಂಗಗಳು, ಶಕ್ತಿಯುತ ಧ್ಯಾನ ಇಂದಿನ ಕಾರ್ಯಕ್ರಮದ ಪ್ರಮುಖ ಆಕರ್ಷಣೆಗಳಾಗಿವೆ. ಪ್ರಸಿದ್ಧ ಕಲಾವಿದರಿಂದ ಸಂಗೀತ ಪ್ರದರ್ಶನಗಳು ಸಹ ಇರುತ್ತವೆ. ಈ ಕಾರ್ಯಕ್ರಮವನ್ನು ಇಶಾದ ಯೂಟ್ಯೂಬ್ ಚಾನೆಲ್‌ನಲ್ಲಿ ಮತ್ತು ಸ್ಥಳೀಯ ಕೇಂದ್ರಗಳಲ್ಲಿ ಲೈವ್ ಸ್ಟ್ರೀಮಿಂಗ್ ಮೂಲಕ ಪ್ರಪಂಚದಾದ್ಯಂತ ವೀಕ್ಷಿಸಬಹುದು.

Guru Mantras: ಗುರು ಮಂತ್ರ ಎಂದರೇನು? ಅದರ ಮಹತ್ವವನ್ನು ಇಲ್ಲಿ ತಿಳಿದುಕೊಳ್ಳಿ

ಗುರುಪೂರ್ಣಿಮೆಯು ಗುರುಗಳಿಗೆ ಸಮರ್ಪಿತವಾದ ಪವಿತ್ರ ದಿನ. ಈ ದಿನ ಗುರುಗಳ ಆಶೀರ್ವಾದ ಪಡೆಯುವುದು ಮತ್ತು ಅವರು ನೀಡಿದ ಜ್ಞಾನಕ್ಕೆ ಕೃತಜ್ಞತೆ ಸಲ್ಲಿಸುವುದು ಮುಖ್ಯ. ಗುರುಗಳು ನೀಡುವ ಗುರುಮಂತ್ರವು ಆಧ್ಯಾತ್ಮಿಕ ಪ್ರಗತಿಗೆ ಸಹಾಯ ಮಾಡುತ್ತದೆ. ಇಲ್ಲಿ ಗುರುಪೂರ್ಣಿಮೆಯ ಮಹತ್ವ, ಗುರುಮಂತ್ರದ ಪ್ರಾಮುಖ್ಯತೆ ಮತ್ತು ಅದರ ಜಪನ ವಿಧಾನವನ್ನು ವಿವರಿಸುಲಾಗಿದೆ.