AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುರುಪೂರ್ಣಿಮೆ: ಗುರು ರಾಯರಿಂದ ಸಾಕಷ್ಟು ಪ್ರಭಾವಿತರಾಗಿದ್ದ ರಾಜ್​ಕುಮಾರ್

ಗುರುಪೂರ್ಣಿಮೆಯಂದು ರಾಜ್‌ಕುಮಾರ್ ಅವರ ರಾಯರ ಭಕ್ತಿಯನ್ನು ನೆನಪಿಸಿಕೊಳ್ಳುವುದು ಅತ್ಯಂತ ಸೂಕ್ತ. ರಾಘವೇಂದ್ರ ಸ್ವಾಮಿಗಳ ಮೇಲಿನ ಅವರ ಅಪಾರ ನಂಬಿಕೆ 'ಮಂತ್ರಾಲಯ ಮಹಾತ್ಮೆ' ಚಿತ್ರದ ಮೂಲಕ ವ್ಯಕ್ತವಾಗಿದೆ. ಜಗ್ಗೇಶ್ ಅವರೊಂದಿಗಿನ ಅವರ ಚರ್ಚೆಗಳು ಕೂಡ ರಾಯರ ಭಕ್ತಿಯನ್ನು ಸೂಚಿಸುತ್ತವೆ. ಆ ಬಗ್ಗೆ ಇಲ್ಲಿದೆ ವಿವರ.

ಗುರುಪೂರ್ಣಿಮೆ: ಗುರು ರಾಯರಿಂದ ಸಾಕಷ್ಟು ಪ್ರಭಾವಿತರಾಗಿದ್ದ ರಾಜ್​ಕುಮಾರ್
ರಾಜ್​ಕುಮಾರ್
ರಾಜೇಶ್ ದುಗ್ಗುಮನೆ
|

Updated on:Jul 10, 2025 | 10:22 AM

Share

ಇಂದು (ಜುಲೈ 10) ಗುರಪೂರ್ಣಿಮೆ. ಇದರ ಜೊತೆಗೆ ರಾಯರ ದಿನವೂ ಹೌದು. ಎರಡೂ ವಿಶೇಷತೆಗಳು ಒಂದೇ ದಿನ ಬರೋದು ಅಪರೂಪ. ಈ ದಿನದಂದು ರಾಜ್​ಕುಮಾರ್ ಅವರ ರಾಯರ ಭಕ್ತಿಯನ್ನು ನೆನಪಿಸಿಕೊಳ್ಳಲೇಬೇಕು. ರಾಜ್​ಕುಮಾರ್ (Rajkumar) ಅವರು ರಾಘವೇಂದ್ರ ಸ್ವಾಮಿಗಳನ್ನು ಅಪರಾವಾಗಿ ನಂಬುತ್ತಿದ್ದರು. ಇದಕ್ಕಾಗಿ ಅವರು ರಾಯರ ಮೇಲೆ ಸಿನಿಮಾವನ್ನೇ ಮಾಡಿದ್ದರು. ರಾಘವೇಂದ್ರ ಸ್ವಾಮಿಗಳ ಬಗ್ಗೆ ಹಾಡುಗಳನ್ನು ಕೂಡ ಹಾಡಿದ್ದಾರೆ.

ಜಗ್ಗೇಶ್ ಸಿಕ್ಕಾಗ..

ಜಗ್ಗೇಶ್ ಅವರು ಕೂಡ ರಾಯರ ಭಕ್ತರು. ರಾಜ್​ಕುಮಾರ್ ಹಾಗೂ ಜಗ್ಗೇಶ್ ಸಿಕ್ಕಾಗ ಇದೇ ರೀತಿಯ ಚರ್ಚೆಗಳೇ ನಡೆಯುತ್ತಿದ್ದವು. ‘ಅಧ್ಯಾತ್ಮದ ಬಗ್ಗೆ ರಾಜ್​ಕುಮಾರ್​ಗೆ ಅಪಾರ ಆಸಕ್ತಿ ಇತ್ತು. ನಾನು ಹಾಗೂ ರಾಜ್​ಕುಮಾರ್ ಸಿಕ್ಕಾಗ ರಾಘವೇಂದ್ರ ಸ್ವಾಮಿಗಳ ಬಗ್ಗೆಯೇ ಮಾತನಾಡುತ್ತಿದ್ದೆವು. ರಾಯರ ಜೊತೆಗೆ ಅವರು ಬೆರೆತು ಹೋಗಿದ್ದರು. ಅವರು ಪರಮ ದೈವ ಭಕ್ತ ಆಗಿದ್ದರು’ ಎಂದು ಜಗ್ಗೇಶ್ ಹೇಳಿದ್ದರು.

ಮಗನಿಗೂ ಹೆಸರು..

ರಾಜ್​ಕುಮಾರ್ ತಮಗೆ ಜನಿಸಿದ ಮೊದಲ ಮಗನಿಗೆ ರಾಯರ ಹೆಸರನ್ನೇ ಇಟ್ಟಿದ್ದಾರೆ. ರಾಘವೇಂದ್ರ ಎಂಬುದು ರಾಜ್​ಕುಮಾರ್ ಅವರ ಹಿರಿಯ ಮಗನ ಹೆಸರು. ರಾಜ್​ಕುಮಾರ್​ಗೆ ರಾಯರ ಮೇಲೆ ಎಷ್ಟು ನಂಬಿಕೆ ಇತ್ತು ಎಂದು ಈ ವಿಚಾರ ಸಾರುತ್ತದೆ.

ಇದನ್ನೂ ಓದಿ
Image
ವಿಎಫ್​ಎಕ್ಸ್ ಮಶಿನ್, 86 ಕ್ಯಾಮೆರಾಗಳ ಮಧ್ಯೆ ಶೂಟ್ ಮಾಡಿದ ಯಶ್
Image
ಟಾಲಿವುಡ್​​ನ ಸ್ಟಾರ್ ಹೀರೋ ಚಿತ್ರಕ್ಕೆ ನಾಯಕಿ ಆದ ರಶ್ಮಿಕಾ ಮಂದಣ್ಣ
Image
ಆಂಧ್ರ ಪ್ರದೇಶದಲ್ಲಿ ಗಾಂಜಾ ಕಡಿಮೆ ಮಾಡಿದ ನಟ ಪವನ್ ಕಲ್ಯಾಣ್
Image
‘ನಿವೇದಿತಾಳನ್ನು ಈಗಲೂ ಮಿಸ್ ಮಾಡಿ ಕೊಳ್ತೀನಿ’; ಚಂದನ್ ಶೆಟ್ಟಿ

ಸಿನಿಮಾ ಮಾಡಲು ಆಸಕ್ತಿ..

1966ರಲ್ಲಿ ‘ಮಂತ್ರಾಲಯ ಮಹಾತ್ಮೆ’ ಹೆಸರಿನ ಸಿನಿಮಾ ಬಂತು. ಈ ಚಿತ್ರದಲ್ಲಿ ರಾಜ್​ಕುಮಾರ್ ಅವರು ರಾಯರ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರು ಈ ಪಾತ್ರವನ್ನು ಅಕ್ಷರಶಃ ಜೀವಿಸಿದ್ದರು. ಈ ಸಿನಿಮಾ ಮಾಡಲು ಸ್ಫೂರ್ತಿ ನೀಡಿದ್ದು ಕೂಡ ರಾಯರೇ.

ಇದನ್ನೂ ಓದಿ: 666 ಆಪರೇಷನ್ ಡ್ರೀಮ್ ಥಿಯೇಟರ್‌: ಶಿವರಾಜ್‌ಕುಮಾರ್ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ

ರಾಜ್​ಕುಮಾರ್ ಅವರು ಮಂತ್ರಾಲಯಕ್ಕೆ ತೆರಳಿ ರಾಯರ ಗುಡಿಯಲ್ಲೇ ಮಲಗಿದ್ದರು. ಬೆಳಿಗ್ಗೆ ಎದ್ದ ತಕ್ಷಣ ಅವರಿಗೆ ಏನನ್ನಿಸಿತೋ ಏನೋ, ನೇರವಾಗಿ ಎದ್ದು, ದೇವರಿಗೆ ನಮಿಸಿ ಬೆಂಗಳೂರಿಗೆ ಬಂದರು. ಅವರು ನಿರ್ಮಾಪಕರ ಕರೆದು ಈ ರೀತಿಯ ಸಿನಿಮಾನ ತಾವು ಮಾಡಬೇಕು ಎಂದು ಬೇಡಿಕೆ ಇಟ್ಟರು. ಆ ಬಳಿಕ ಸಿನಿಮಾ ಆಯಿತು. ‘ಹಾಲಲ್ಲಾದರೂ ಹಾಕು..’ ಹಾಡನ್ನು ರಾಜ್​ಕುಮಾರ್ ಅವರು ಶ್ರದ್ಧೆಯಿಂದ ಹಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:59 am, Thu, 10 July 25