ಶಿವಮೊಗ್ಗ: ಕಾಂಗ್ರೆಸ್ ಸೇರ್ಪಡೆಯಾಗಿರುವ ಜಗದೀಶ್ ಶೆಟ್ಟರ್ (Jagadish Shettar) ಅವರ ಮೈಮೇಲೆ ಹರಿಯುತ್ತಿರುವುದು ಹಿಂದೂ ರಕ್ತ. ಅವರು ಬಿಜೆಪಿಗೆ (BJP) ವಾಪಸ್ ಆಗುವುದು ಖಚಿತ ಎಂದು ಕೆಎಸ್ ಈಶ್ವರಪ್ಪ (KS Eshwarappa) ಅವರು ಹೇಳಿದ್ದಾರೆ. ಟಿಕೆಟ್ ಸಿಗದ ಸಿಟ್ಟಿಗೆ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್ನಲ್ಲಿರುವ ಎರಡು ಬಣಗಳಲ್ಲಿ (ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್) ಶೆಟ್ಟರ್ ಯಾವ ಬಣಕ್ಕೆ ಸೇರುತ್ತಾರೆ ಎಂದು ತೀರ್ಮಾನಿಸಲಿ ಎಂದು ಟಾಂಗ್ ಕೊಟ್ಟರು. ಅಲ್ಲದೆ, ಜಗದೀಶ ಶೆಟ್ಟರ್ ಮೈಮೇಲೆ ಹರಿಯುತ್ತಿರುವುದು ಹಿಂದೂ ರಕ್ತ. ಹೀಗಾಗಿ ಮುಸ್ಲಿಮರು ಹಾಕಿದ ಟೋಪಿಯನ್ನು ಕೂಡಲೇ ತೆಗೆದರು. ಆದಷ್ಟು ಬೇಗ ನೀವು ವಾಪಸ್ ಬಿಜೆಪಿಗೆ ಬರುತ್ತೀರಿ. ಅವರು ಬಿಜೆಪಿ ಸೇರುವುದು ಗ್ಯಾರಂಟಿ ಎಂದರು.
ಮತ್ತಷ್ಟು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 5:29 pm, Mon, 24 April 23