ಬಿಗ್ಬಾಸ್ ಕನ್ನಡ ಸೀಸನ್ 11ರಿಂದ ಲಾಯರ್ ಜಗದೀಶ್ ಅನ್ನು ಹೊರ ಹಾಕಲಾಗಿದೆ. ಜಗದೀಶ್, ಮನೆಯೊಳಗೆ ಬಳಸಿದ ಭಾಷೆ, ನಡೆದುಕೊಂಡ ರೀತಿ, ತೋರಿದ ನಡವಳಿಕೆಗಳಿಂದಾಗಿ ಜಗದೀಶ್ ಅನ್ನು ಹೊರಗೆ ಹಾಕಲಾಗಿದೆ. ಜಗದೀಶ್ ಮೇಲೆ ಕೈ ಮಾಡಿದ್ದಕ್ಕೆ ರಂಜಿತ್ ಸಹ ಹೊರಗೆ ಹೋಗಿದ್ದಾರೆ. ಆದರೆ ಕಲರ್ಸ್ ವಾಹಿನಿ ಹಂಚಿಕೊಂಡಿರುವ ಹೊಸ ಪ್ರೋಮೋದಲ್ಲಿ ಬಿಗ್ಬಾಸ್ ವೇದಿಕೆ ಮೇಲೆ ಜಗದೀಶ್ ಕಾಣಿಸಿಕೊಂಡಿದ್ದಾರೆ. ಹೌದು, ಜಗದೀಶ್ ಮಾತನಾಡಿರುವ ವಿಡಿಯೋವನ್ನು ಸುದೀಪ್ ಪ್ರಸಾರ ಮಾಡಿದ್ದಾರೆ. ವಿಡಿಯೋನಲ್ಲಿ ತಮ್ಮ ವರ್ತನೆ ಬಗ್ಗೆ ಕ್ಷಮೆ ಕೇಳಿರುವ ಜಗದೀಶ್, ಮನೆಯ ಸದಸ್ಯರ ಬಗ್ಗೆ ಸಹ ಮಾತನಾಡಿದ್ದಾರೆ. ಸಾಧ್ಯವಾದರೆ ನನ್ನನ್ನು ವಾಪಸ್ ಕರೆಸಿಕೊಳ್ಳಿ ಎಂದು ಮನವಿ ಸಹ ಮಾಡಿದ್ದಾರೆ. ನಿನ್ನೆ ಸುದೀಪ್, ಜಗದೀಶ್ ಪರವಾಗಿ ಮಾತನಾಡಿದ್ದರು, ಈಗ ಅವರ ವಿಡಿಯೋ ಪ್ರಸಾರ ಮಾಡಿರುವುದು ನೋಡಿದರೆ ಜಗದೀಶ್ ಅನ್ನು ಮತ್ತೆ ಒಳಗೆ ಕರೆಸಿಕೊಳ್ಳುತ್ತಾರೆಯೇ ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ