AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

BJP MLA’s corruption case: ಯಾಕಪ್ಪಾ ರವಿ ಸುಮ್ಮನಿದ್ದೀಯಾ? ಕಟೀಲು ಬಾರಿಸು ಪಿಟೀಲು: ಸಿಎಮ್ ಇಬ್ರಾಹಿಂ

BJP MLA’s corruption case: ಯಾಕಪ್ಪಾ ರವಿ ಸುಮ್ಮನಿದ್ದೀಯಾ? ಕಟೀಲು ಬಾರಿಸು ಪಿಟೀಲು: ಸಿಎಮ್ ಇಬ್ರಾಹಿಂ

ಅರುಣ್​ ಕುಮಾರ್​ ಬೆಳ್ಳಿ
ಅರುಣ್​ ಕುಮಾರ್​ ಬೆಳ್ಳಿ|

Updated on: Mar 03, 2023 | 6:17 PM

Share

ರಾಮನಗರದಲ್ಲಿಂದು ಮಾತಾಡಿದ ಇಬ್ರಾಹಿಂ ಅವರು ‘ಈಗೇನ್ ಹೇಳ್ತಿಯಪ್ಪಾ ರವಿ (ಸಿಟಿ ರವಿ), ಯಡಿಯೂರಪ್ಪನವರೇ ನೀವೇನು ಹೇಳ್ತೀರಿ? ಕಟೀಲು ಬಾರಿಸು ಪಿಟೀಲು!’ ಅಂತೆಲ್ಲ ಗೇಲಿ ಮಾಡಿದರು.

ರಾಮನಗರ: ಜೆಡಿಎಸ್ ರಾಜ್ಯಾಧ್ಯಕ್ಷ ಸಿ ಎಮ್ ಇಬ್ರಾಹಿಂ (CM Ibrahim), ಬೇರೆ ಪಕ್ಷಗಳ ನಾಯಕರನ್ನು ಗೇಲಿ ಮಾಡುವುದರಲ್ಲಿ ಎತ್ತಿದ ಕೈ. ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪಬರ ಮನೆಯಲ್ಲಿ 8 ಕೋಟಿಗೂ ಹೆಚ್ಚು ಹಣ ಪತ್ತೆಯಾಗಿರುವ ವಿಷಯಕ್ಕೆ ಸಂಬಂಧಿಸಿದಂತೆ ನಗರದಲ್ಲಿಂದು ಮಾತಾಡಿದ ಇಬ್ರಾಹಿಂ ಅವರು ‘ಈಗೇನ್ ಹೇಳ್ತಿಯಪ್ಪಾ ರವಿ (ಸಿಟಿ ರವಿ) (CT Ravi), ಯಡಿಯೂರಪ್ಪನವರೇ ನೀವೇನು ಹೇಳ್ತೀರಿ? ಕಟೀಲು (Nalin Kumar Kateel) ಬಾರಿಸು ಪಿಟೀಲು!’ ಅಂತೆಲ್ಲ ಗೇಲಿ ಮಾಡಿದರು. ಗುತ್ತಿಗೆದಾರರ ಸಂಘದವರು ಸರ್ಕಾರದ ಮಂತ್ರಿಗಳು ಕಮೀಶನ್ ಪಡೆಯುತ್ತಿರುವ ಬಗ್ಗೆ ದಾಖಲೆ ಸಮೇತ ಹೇಳಿಕೆ ನೀಡಿದಾಗ ಅವರು ಸುಳ್ಳು ಹೇಳಿತ್ತಿದ್ದಾರೆ ಅಂತ ಬಿಜೆಪಿಯವರು ಹೇಳಿದರು. ಹಾಗಾದರೆ, ಅವರು ಸಂಘದ ಪದಾಧಿಕಾರಿಗಳ ವಿರುದ್ಧ ಯಾಕೆ ಕೇಸ್ ಮಾಡಲಿಲ್ಲ ಎಂದು ಇಬ್ರಾಹಿಂ ಪ್ರಶ್ನಿಸಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.