AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Opposition Leaders Meet: ಸೀಟು ಹುಡುಕಾಡುತ್ತಿದ್ದ ಸಿದ್ದರಾಮಯ್ಯರಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮದನ್ನು ಕೊಡಲು ಮುಂದಾದರು!

Opposition Leaders Meet: ಸೀಟು ಹುಡುಕಾಡುತ್ತಿದ್ದ ಸಿದ್ದರಾಮಯ್ಯರಿಗೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ತಮ್ಮದನ್ನು ಕೊಡಲು ಮುಂದಾದರು!

ಅರುಣ್​ ಕುಮಾರ್​ ಬೆಳ್ಳಿ
|

Updated on: Jul 18, 2023 | 6:54 PM

ಆದರೆ, ಸಿದ್ದರಾಮಯ್ಯ ಹೇಮಂತ್ ಭುಜ ತಟ್ಟಿ ಕೂತ್ಕೊಳ್ಳಿ ಅಂತ ಹೇಳಿ ಅವರ ಪಕ್ಕದ ಸೀಟಲ್ಲಿ ಆಸೀನರಾಗುತ್ತಾರೆ.

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರಲಿ, ವಿರೋಧ ಪಕ್ಷದ ನಾಯಕನಾಗಿರಲಿ ಅಥವಾ ಕೇವಲ ಒಬ್ಬ ಶಾಸಕನಾಗಿರಲಿ, ನೀರು ತನ್ನ ಮಟ್ಟವನ್ನು ಕಾಯ್ದುಕೊಳ್ಳುವ ಹಾಗೆ ತಮ್ಮ ಗತ್ತನ್ನು ಕಾಯ್ದುಕೊಳ್ಳುತ್ತಾರೆ. 26 ವಿರೋಧ ಪಕ್ಷಗಳ ನಾಯಕರು ಇಂದು ಬೆಂಗಳೂರಲ್ಲಿ ನಡೆಸಿದ ಸಭೆಯ ವೇದಿಕೆಗೆ ಅವರು ತಮ್ಮ ಎಂದಿನ ಗತ್ತಿನಲ್ಲೇ ಆಗಮಿಸಿದರು. ಆದರೆ ಕೂರಲು ಅವರಿಗೆ ತಕ್ಷಣಕ್ಕೆ ಆಸನ ಸಿಗೋದಿಲ್ಲ. ಅಯೋಜಕರು ಮೊದಲ ಸಾಲಿನ ಕೊನೆಯಲ್ಲಿ ಸೀಟು ಇರುವುದನ್ನು ತೋರಿಸಿದಾಗ ಮುಖ್ಯಮಂತ್ರಿ ನಿಧಾನಕ್ಕೆ ನಡೆಯುತ್ತಾ ಅಲ್ಲಿಗೆ ಹೋಗುತ್ತಾರೆ. ವೇದಿಕೆ ಮೇಲಿದ್ದ ಇತರ ನಾಯಕರು ತಮ್ಮ ತಮ್ಮ ಮಾತುಗಳಲ್ಲಿ ಬ್ಯೂಸಿಯಾಗಿರುತ್ತಾರೆ. ಆದರೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಸಿದ್ದರಾಮಯ್ಯರನ್ನು ಕಂಡಾಕ್ಷಣ ಎದ್ದು ನಿಂತು ತಮ್ಮ ಸೀಟು ಬಿಟ್ಟುಕೊಡಲು ಮುಂದಾಗುತ್ತಾರೆ. ಆದರೆ, ಸಿದ್ದರಾಮಯ್ಯ ಹೇಮಂತ್ ಭುಜ ತಟ್ಟಿ ಕೂತ್ಕೊಳ್ಳಿ ಅಂತ ಹೇಳಿ ಅವರ ಪಕ್ಕದ ಸೀಟಲ್ಲಿ ಆಸೀನರಾಗುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ