ವಿಡಿಯೋ: ಉಡುಪಿ ಕೃಷ್ಣನ ದರ್ಶನ ಪಡೆದು ಕನ್ನಡದಲ್ಲಿ ಮಾತನಾಡಿದ ಜೂ ಎನ್​ಟಿಆರ್

Jr NTR: ಜೂ ಎನ್​ಟಿಆರ್ ಇಂದು ಕರ್ನಾಟಕಕ್ಕೆ ಬಂದಿದ್ದರು. ತಾಯಿಯ ಆಸೆ ಈಡೇರಿಸಲು ಅವರು ರಾಜ್ಯಕ್ಕೆ ಭೇಟಿ ನೀಡಿದ್ದು ವಿಶೇಷ. ಉಡುಪಿ ಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಜೂ ಎನ್​ಟಿಆರ್, ತಮಗೆ ಎದುರಾದ ಮಾಧ್ಯಮಗಳೊಡನೆ ಕನ್ನಡದಲ್ಲಿಯೇ ಮಾತನಾಡಿದರು.

ವಿಡಿಯೋ: ಉಡುಪಿ ಕೃಷ್ಣನ ದರ್ಶನ ಪಡೆದು ಕನ್ನಡದಲ್ಲಿ ಮಾತನಾಡಿದ ಜೂ ಎನ್​ಟಿಆರ್
|

Updated on: Aug 31, 2024 | 10:02 PM

ನಟ ಜೂ ಎನ್​ಟಿಆರ್ ಇಂದು (ಆಗಸ್ಟ್ 31) ಕರ್ನಾಟಕಕ್ಕೆ ಭೇಟಿ ನೀಡಿದ್ದರು. ತಮ್ಮ ತಾಯಿಯ ಆಸೆಯಂತೆ ಅವರ ಹುಟ್ಟುಹಬ್ಬಕ್ಕೆ ಮುಂಚೆ ಅವರನ್ನು ಕುಂದಾಪುರಕ್ಕೆ ಹಾಗೂ ಉಡುಪಿಯ ಶ್ರೀಕೃಷ್ಣ ದೇವಸ್ಥಾನಕ್ಕೆ ಕರೆತಂದಿದ್ದರು. ಜೂ ಎನ್​ಟಿಆರ್ ಜೊತೆಗೆ ನಟ ರಿಷಬ್ ಶೆಟ್ಟಿ ಹಾಗೂ ಪ್ರಶಾಂತ್ ನೀಲ್ ಜೊತೆಗಿದ್ದರು. ಮಂಗಳೂರಿಗೆ ಬಂದಿಳಿದು, ಅಲ್ಲಿಂದ ಉಡುಪಿ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ, ಅಲ್ಲಿಂದ ಕುಂದಾಪುರಕ್ಕೆ ತೆರಳಿದ ಜೂ ಎನ್​ಟಿಆರ್ ಆ ನಂತರ ಬಸ್ರೂರಿಗೆ ತೆರಳಿ ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸ್ಟುಡಿಯೋಗೆ ಭೇಟಿ ನೀಡಿದರು. ಅಲ್ಲಿ ತಮ್ಮ ಮುಂದಿನ ‘ಡ್ರ್ಯಾಗನ್’ ಸಿನಿಮಾದ ಕೆಲವು ಟ್ಯೂನ್​ಗಳನ್ನು ಸಹ ಕೇಳಿದರಂತೆ. ಈ ಸಮಯದಲ್ಲಿ ರಿಷಬ್ ಶೆಟ್ಟಿ ಸಹ ಜೊತೆಗೆ ಇದ್ದರು. ಉಡುಪಿ ಮಠಕ್ಕೆ ಭೇಟಿ ನೀಡಿದ್ದಾಗ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಜೂ ಎನ್​ಟಿಆರ್, ಕನ್ನಡದಲ್ಲಿ ಸುಲಲಿತವಾಗಿ ಮಾತನಾಡಿ ಆಶ್ಚರ್ಯ ಮೂಡಿಸಿದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us