ಭತ್ತದ ಮೂಟೆ ಹೊತ್ತ ಲಾರಿ ಸಾಗುತ್ತಿರುವಾಗಲೇ ಮೈಸೂರಿನ ಇಟ್ನಾ ಬಳಿ ಕುಸಿದುಬಿದ್ದ ಕಬಿನಿ ಬಲದಂಡೆ ನಾಲೆ ಸೇತುವೆ

ಅರುಣ್​ ಕುಮಾರ್​ ಬೆಳ್ಳಿ

Updated on: Aug 06, 2025 | 10:59 AM

ಇಟ್ನಾದ ಸೇತುವೆ ಅಷ್ಟು ದೊಡ್ಡದೇನೂ ಅಲ್ಲ, ಸಾಮಾನ್ಯವಾಗಿ ನಾಲೆಗಳ ಮೇಲೆ ನಿರ್ಮಾಣಗೊಳ್ಳುವ ಸೇತುವೆಗಳು ಚಿಕ್ಕವಾಗಿರುತ್ತವೆ. ಕಬಿನಿ ನಾಲೆಯಲ್ಲಿ ನೀರು ರಭಸದಿಂದ ಹರಿಯುತ್ತಿಲ್ಲ. ಲಾರಿ ಹೆಚ್ಚು ಜಖಂಗೊಂಡಿಲ್ಲ. ಅದರಲ್ಲಿದ್ದ ಭತ್ತದ ಮೂಟೆಗಳನ್ನು ಮತ್ತೊಂದು ಲಾರಿಗೆ ಶಿಫ್ಟ್ ಮಾಡುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹುದು. ಸೇತುವೆ ರಿಪೇರಿಗೆ ಸಮಯ ಹಿಡಿಯಲಿರುವುದರಿಂದ ಸದ್ಯಕ್ಕೆ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಆದಂತೆಯೇ.

ಮೈಸೂರು, ಆಗಸ್ಟ್ 6: ಪ್ತಸಕ್ತ ಮಳೆಗಾಲದಲ್ಲಿ ಸೇತುವೆಗಳು ಕುಸಿದುಬೀಳುತ್ತಿರು ಘಟನೆಗಳು ಹೆಚ್ಚು ಸಂಭವಿಸುತ್ತಿವೆ. ಜಿಲ್ಲೆಯ ಸರಗೂರು ತಾಲೂಕಿನ (Sarugur Taluk) ಇಟ್ನಾ ಸಮೀಪದ ಕಬಿನಿ ಬಲದಂಡೆ ನಾಲೆ ಮೇಲಿನ ಸೇತುವೆಯ ಮೇಲೆ ಲಾರಿಯೊಂದು ಸಾಗುತ್ತಿದ್ದಾಗ ಅದು ಕುಸಿದು ಅವಘಡ ಸಂಭವಿಸಿದೆ. ನಮ್ಮ ಮೈಸೂರು ವರದಿಗಾರ ನೀಡುವ ಮಾಹಿತಿಯಂತೆ ಭತ್ತದ ಮೂಟೆಗಳನ್ನು ಹೇರಿದ ಲಾರಿಯು ಪುರದಕಟ್ಟೆ ಮಾರ್ಗವಾಗಿ ನಂಜನಗೂಡಿಗೆ ಹೋಗುತ್ತಿದ್ದಾಗ ಸೇತುವೆ ಹಠಾತ್ತನೆ ಕುಸಿದಿದೆ. ವಾಹನವನ್ನು ಓಡಿಸುತ್ತಿದ್ದ ಚಾಲಕ ಸುರಕ್ಷಿತವಾಗಿದ್ದಾನೆ.

ಇದನ್ನೂ ಓದಿ:   ದೆಹಲಿ-ಜಮ್ಮು ರೈಲ್ವೆ ಸೇತುವೆ ಕುಸಿತ; ಕೂದಲೆಳೆ ಅಂತರದಲ್ಲಿ ರೈಲು ಬಚಾವ್

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.