AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಬ್ಜ ಸಿನಿಮಾದ ಚಿತ್ರೀಕರಣದ ಸಂದರ್ಭ ಎದುರಾದ ಕಷ್ಟಗಳ ನೆನೆದು ಕಣ್ಣೀರು ಹಾಕಿದ ಆರ್.ಚಂದ್ರುಕಬ್ಜ ಸಿನಿಮಾದ ಚಿತ್ರೀಕರಣದ ಸಂದರ್ಭ ಎದುರಾದ ಕಷ್ಟಗಳ ನೆನೆದು ಕಣ್ಣೀರು ಹಾಕಿದ ಆರ್.ಚಂದ್ರು

ಕಬ್ಜ ಸಿನಿಮಾದ ಚಿತ್ರೀಕರಣದ ಸಂದರ್ಭ ಎದುರಾದ ಕಷ್ಟಗಳ ನೆನೆದು ಕಣ್ಣೀರು ಹಾಕಿದ ಆರ್.ಚಂದ್ರು

ಮಂಜುನಾಥ ಸಿ.
|

Updated on:Mar 19, 2023 | 9:58 PM

Share

ಕಬ್ಜ ಸಿನಿಮಾ ಮೂಲಕ ದೊಡ್ಡ ಗೆಲುವನ್ನು ಆರ್.ಚಂದ್ರು ಸಾಧಿಸಿದ್ದಾರೆ. ಆ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ತಾವು ಎದುರಿಸಿದ ಕಷ್ಟಗಳನ್ನು ನೆನೆದು ಚಂದ್ರು ಕಣ್ಣೀರು ಹಾಕಿದ್ದಾರೆ. ಅವರ ಕಷ್ಟದ ಕತೆ ಅವರಿಂದಲೇ ಕೇಳಿ.

ಕಬ್ಜ (Kabzaa) ಸಿನಿಮಾ ಮೂಲಕ ಆರ್.ಚಂದ್ರು (R Chandru) ದೊಡ್ಡ ಗೆಲುವು ಸಾಧಿಸಿದ್ದಾರೆ. ಚಂದ್ರು ಪಾಲಿಗೆ ಈ ಗೆಲುವು ಬಹಳ ಮಹತ್ವದ್ದು. ಈ ಗೆಲುವು ಅವರ ಪಟ್ಟ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ. ಅವರು ಎದುರಿಸಿದ ಅವಮಾನಗಳಿಗೆ ಕೊಟ್ಟ ದಿಟ್ಟ ಉತ್ತರ. ಹಾಗಾಗಿ ಸಹಜವಾಗಿಯೇ ಈ ಗೆಲುವು ಅವರನ್ನು ಭಾವುಕರನ್ನಾಗಿಸಿದೆ. ಸಿನಿಮಾದ ಗೆಲುವಿನ ಯಶಸ್ಸನ್ನು ಸಂಭ್ರಮಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಆರ್.ಚಂದ್ರು, ಚಿತ್ರೀಕರಣದ ಸಂದರ್ಭದಲ್ಲಿ ತಾವೆದುರಿಸಿದ ಕಷ್ಟಗಳ ನೆನೆದು ಕಣ್ಣೀರು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published on: Mar 19, 2023 09:54 PM

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More