ನಮ್ಮ ಮೆಟ್ರೋ : ಅಖಾಡಕ್ಕಿಳಿದ ವಾಟಾಳ್ ನಾಗರಾಜ್, ಬಿಎಂಆರ್​​ಸಿಎಲ್​​​ಗೆ ಡೆಡ್​​ಲೈನ್

Updated on: Feb 09, 2026 | 8:32 PM

ಮೆಟ್ರೋ ದರ ಏರಿಕೆ ಹಿನ್ನಲೆ ಇಂದು (ಫೆಬ್​ರವರಿ 09) ಬೆಂಗಳೂರಿನ ಡಾ. ಬಿಆರ್ ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ಮೆಟ್ರೋ ದರ ಏರಿಕೆ ಮಾಡಿ ಪ್ರಾಯಾಣಿಕರ ಹೊರೆಯನ್ನ ಹೆಚ್ಚು ಮಾಡಿ ಕನ್ನಡಿಗರನ್ನ ಕೆರಳುವಂತೆ ಮಾಡಿದೆ. ಈ ಕೂಡಲೇ ಮೆಟ್ರೋ ದರ ಏರಿಕೆಯನ್ನು ಹಿಂಪಡೆಯಬೇಕು,ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಇಲ್ಲವಾದರೆ ನಾವು ಬೀದಿಗೆ ಇಳಿಯುತ್ತೇವೆ. ಮಾರ್ಚ್ 7ರವರೆಗೆ ನಿಮ್ಗೆ ಅವಾಕಶ ಕೊಡುತ್ತೇವೆ. ಒಪ್ಪದೆ ಹೋದ್ರೆ ಅವತ್ತು ಇಡೀ ಬೆಂಗಳೂರಲ್ಲಿ ಸಂಪೂರ್ಣವಾಗಿ ಮೆಟ್ರೋ ನಿಲ್ಲಿಸುತ್ತೇವೆ. ಜೊತೆಗೆ ಸಾರ್ವಜನಿಕರಿಗೂ ಕೂಡ ಮೆಟ್ರೋ ಹತ್ತೋಕೆ ಬಿಡಲ್ಲ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು, (ಫೆಬ್ರವರಿ 09): ನಮ್ಮ ಮೆಟ್ರೋ ಟಿಕೆಟ್ ದರ ಏರಿಕೆ ಬಗ್ಗೆ ಇಂದು (ಫೆಬ್​ರವರಿ 09) ಬೆಂಗಳೂರಿನ ಡಾ. ಬಿಆರ್ ಅಂಬೇಡ್ಕರ್ ಮೆಟ್ರೋ ನಿಲ್ದಾಣದಲ್ಲಿ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿಭಿನ್ನ ರೀತಿಯಲ್ಲಿ ಪ್ರತಿಭಟನೆಯನ್ನ ಹಮ್ಮಿಕೊಳ್ಳಲಾಗಿತ್ತು. ಮೆಟ್ರೋ ದರ ಏರಿಕೆ ಮಾಡಿ ಪ್ರಾಯಾಣಿಕರ ಹೊರೆಯನ್ನ ಹೆಚ್ಚು ಮಾಡಿ ಕನ್ನಡಿಗರನ್ನ ಕೆರಳುವಂತೆ ಮಾಡಿದೆ. ಈ ಕೂಡಲೇ ಮೆಟ್ರೋ ದರ ಏರಿಕೆಯನ್ನು ಹಿಂಪಡೆಯಬೇಕು,ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಬಳಕೆ ಮಾಡಬೇಕು. ಇಲ್ಲವಾದರೆ ನಾವು ಬೀದಿಗೆ ಇಳಿಯುತ್ತೇವೆ. ಮಾರ್ಚ್ 7ರವರೆಗೆ ನಿಮ್ಗೆ ಅವಾಕಶ ಕೊಡುತ್ತೇವೆ. ಒಪ್ಪದೆ ಹೋದ್ರೆ ಅವತ್ತು ಇಡೀ ಬೆಂಗಳೂರಲ್ಲಿ ಸಂಪೂರ್ಣವಾಗಿ ಮೆಟ್ರೋ ನಿಲ್ಲಿಸುತ್ತೇವೆ. ಜೊತೆಗೆ ಸಾರ್ವಜನಿಕರಿಗೂ ಕೂಡ ಮೆಟ್ರೋ ಹತ್ತೋಕೆ ಬಿಡಲ್ಲ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 09, 2026 08:31 PM