ಬೆಳಗಾವಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಅವರಿಗೆ ಪಕ್ಷದ ಹೈಕಮಾಂಡ್ ವಿರುದ್ಧ ಇರುವ ಅಸಮಾಧಾನ ಕಡಿಮೆಯಾಗುವ ಲಕ್ಷಣಗಳಿಲ್ಲ. ಚಳಿಗಾಲದ ಅಧಿವೇಶನದಲ್ಲಿ ಭಾಗವಹಿಸಲು ಆಗಮಿಸಿದ ಅವರು ಟಿವಿ9 ಕನ್ನಡ ವಾಹಿನಿ ವರದಿಗಾರನೊಂದಿಗೆ ಮಾತಾಡುವಾಗ, ವಿರೋಧಪಕ್ಷದ ನಾಯಕನ (Leader of Opposition) ಸ್ಥಾನವನ್ನು ಹೈಕಮಾಂಡ್ ಅನುಕೂಲಸ್ಥರಿಗೆ ನೀಡಿದೆ, ತನ್ನಂಥ ನಿಷ್ಠಾವಂತ ಕಾರ್ಯಕರ್ತ (loyal party worker) ಅವರಿಗೆ ಬೇಕಿಲ್ಲ ಅಂತ ಹೇಳಿದರು. ವಿಧಾನ ಸಭೆಗೆ ಆಯ್ಕೆಯಾಗಿರುವ ಬಿಜೆಪಿ ಶಾಸಕರ ಪೈಕಿ ತಾನೇ ಎಲ್ಲರಿಗಿಂತ ಸಮರ್ಥ ಮತ್ತು ಯೋಗ್ಯ ಅಂತ ಹೇಳಿದ ಯತ್ನಾಳ್ ಅದ್ಯಾವ ಸರ್ವೇಗಳ ಆಧಾರದ ಮೇಲೆ ಬೇರೆಯವರನ್ನು ಪರಿಗಣಿಸಲಾಗಿದೆಯೋ ಅಂತ ವ್ಯಂಗ್ಯವಾಗಿ ಹೇಳಿದರು. ದೆಹಲಿಗೆ ಹೋದಾಗ ಭೇಟಿ ಮಾಡಲು ಅಪಾಯಿಂಟ್ಮೆಂಟ್ ನೀಡದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮೊದಲ ಬಾರಿಗೆ ತನಗೆ ಫೋನ್ ಮಾಡಿ ಸ್ವಲ್ಪ ದಿನ ಕಾಯುವಂತೆ ಹೇಳಿದ್ದಾರೆ ಎಂದು ಯತ್ನಾಳ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ