‘ಇದನ್ನು ಅವರು ಧೈರ್ಯ ಇದ್ದರೆ ಮನೆಯಲ್ಲಿ ಮಾಡಲಿ’; ಡಾರ್ಲಿಂಗ್ ಕೃಷ್ಣಗೆ ಸುದೀಪ್ ಸವಾಲ್

|

Updated on: Jul 15, 2023 | 10:00 AM

‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸಿದ್ದರು. ಈ ವೇಳೆ ಅವರು ಒಂದು ಸವಾಲು ಹಾಕಿದ್ದಾರೆ.

ಸುದೀಪ್ ಅವರು ಅನೇಕ ಸಿನಿಮಾಗಳಿಗೆ ಬೆಂಬಲ ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಡಾರ್ಲಿಂಗ್ ಕೃಷ್ಣ (Darling Krishna) ನಟನೆಯ ‘ಕೌಸಲ್ಯ ಸುಪ್ರಜಾ ರಾಮ’ ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಸುದೀಪ್ ಆಗಮಿಸಿದ್ದರು. ಈ ಸಿನಿಮಾದ ಕಥೆ ಪುರುಷರ ಅಹಂಕಾರದ ಸುತ್ತ ನಡೆಯುತ್ತದೆ. ಟ್ರೇಲರ್​ನಲ್ಲಿ ಈ ಬಗ್ಗೆ ಹಿಂಟ್ ಸಿಕ್ಕಿದೆ. ‘ಹೆಣ್ಣುಮಕ್ಕಳು ತಲೆಮೇಲೆ ಕೂರೋಕೆ ಬಂದರೆ ಅವರ ಕಾಲೆಳೆದು ಕೂರಿಸಬೇಕು’ ಎನ್ನುವ ಡೈಲಾಗ್ ಸಿನಿಮಾದ ಟ್ರೇಲರ್​ನಲ್ಲಿದೆ. ಈ ವಿಚಾರ ಇಟ್ಟುಕೊಂಡು ಸುದೀಪ್ ಕಾಲೆಳೆದಿದ್ದಾರೆ. ‘ಧೈರ್ಯ ಇದ್ದರೆ ಇದನ್ನು ಅವರು ಮನೆಯಲ್ಲಿ ಮಾಡಲಿ’ ಎಂದು ಕೃಷ್ಣಗೆ ಸುದೀಪ್ ಸವಾಲು ಹಾಕಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:45 am, Sat, 15 July 23

Follow us on