‘ಕಾಣಿಸಿದ್ದು ಅಹಂ ಮಾತ್ರ’; ಒಂದು ವಾರದ ಲೆಕ್ಕ ಕೊಟ್ಟ ಕಿಚ್ಚ ಸುದೀಪ್

Updated on: Jan 06, 2024 | 2:33 PM

‘ಈ ವಾರ ಮನೆಯಲ್ಲಿ ಕಾಣಿಸಿದ್ದು ಅಹಂ ಮಾತ್ರ. ನನ್ನ ತಟ್ಟೆಯಲ್ಲಿ ಊಟ ಇಲ್ಲ ಅಂದ್ರೂ ತೊಂದರೆ ಇಲ್ಲ. ಪಕ್ಕದವರು ಊಟ ಮಾಡಬಾರದು ಎಂಬಂತಿತ್ತು’ ಎಂದಿದ್ದಾರೆ ಸುದೀಪ್.

ಈ ವಾರ ನಾನಾ ರೀತಿಯ ಟಾಸ್ಕ್​ಗಳನ್ನು ಬಿಗ್ ಬಾಸ್ ನೀಡಿದರು. ಇದು ವಿನ್ನಿಂಗ್ ಅಮೌಂಟ್​ ಮೇಲೆ ನೇರ ಪ್ರಭಾವ ಬೀರಿದೆ. ಈ ಬಗ್ಗೆ ವೀಕೆಂಡ್ ಎಪಿಸೋಡ್​ನಲ್ಲಿ ಕಿಚ್ಚ ಸುದೀಪ್ (Sudeep) ಅವರು ಮಾತನಾಡಿದ್ದಾರೆ. ಬೊರ್ಡ್ ತೆಗೆದುಕೊಳ್ಳುವಾಗ ಸ್ಪರ್ಧಿಗಳು ಸರಿಯಾದ ನಿರ್ಧಾರ ತೆಗೆದುಕೊಂಡಿಲ್ಲ ಎಂಬುದು ಅನೇಕರ ಆರೋಪ. ಈ ಆರೋಪವನ್ನು ಮನೆ ಮಂದಿ ಒಪ್ಪಿದರು. ‘ಈ ವಾರ ಮನೆಯಲ್ಲಿ ಕಾಣಿಸಿದ್ದು ಅಹಂ ಮಾತ್ರ. ನನ್ನ ತಟ್ಟೆಯಲ್ಲಿ ಊಟ ಇಲ್ಲ ಅಂದ್ರೂ ತೊಂದರೆ ಇಲ್ಲ. ಪಕ್ಕದವರು ಊಟ ಮಾಡಬಾರದು ಎಂಬಂತಿತ್ತು’ ಎಂದಿದ್ದಾರೆ ಸುದೀಪ್. ಇಂದು (ಜನವರಿ 6) ಈ ಎಪಿಸೋಡ್ ಕಲರ್ಸ್ ಕನ್ನಡ ಹಾಗೂ ಜಿಯೋ ಸಿನಿಮಾದಲ್ಲಿ ಪ್ರಸಾರ ಕಾಣಲಿದೆ. ಜಿಯೋ ಸಿನಿಮಾದಲ್ಲಿ 24 ಗಂಟೆ ಲೈವ್ ವೀಕ್ಷಿಸಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More