ಫಿಲಂ ಚೇಂಬರ್ ಅವರನ್ನು ಎದುರುಹಾಕಿಕೊಳ್ಳಲಾಗಲ್ಲ: ಸುದೀಪ್ ಹಾಸ್ಯ
ಸುದೀಪ್

ಫಿಲಂ ಚೇಂಬರ್ ಅವರನ್ನು ಎದುರುಹಾಕಿಕೊಳ್ಳಲಾಗಲ್ಲ: ಸುದೀಪ್ ಹಾಸ್ಯ

Updated on: Nov 19, 2023 | 11:17 PM

Kichcha Sudeep: ನಂದಿ ಅವಾರ್ಡ್ಸ್​ 2023ಗೆ ಚಾಲನೆ ನೀಡಿ ಆಯೋಜಕರಿಗೆ ಶುಭಾಶಯ ಕೋರಿದ ನಟ ಸುದೀಪ್, ಕೆಲವು ಹಿತವಚನಗಳನ್ನು ಸಹ ಹೇಳಿದರು. ಇದೇ ಸಂದರ್ಭದಲ್ಲಿ ಫಿಲಂ ಚೇಂಬರ್ ಬಗ್ಗೆಯೂ ಸುದೀಪ್ ಮಾತನಾಡಿದರು.

ಕಿಚ್ಚ ಸುದೀಪ್ (Sudeep) ಹಾಗೂ ನಿರ್ಮಾಪಕ ಸಂಘದ ಕೆಲ ಸದಸ್ಯರ ನಡುವೆ ಇತ್ತೀಚೆಗೆ ವಿವಾದ ಎದ್ದಿತ್ತು. ನಿರ್ಮಾಪಕರಿಬ್ಬರು, ಸುದೀಪ್ ವಿರುದ್ಧ ಹಣ ವಂಚನೆ ಆರೋಪ ಮಾಡಿದ್ದರು. ಆ ವಿವಾದ ಫಿಲಂ ಚೇಂಬರ್ ಮೆಟ್ಟಿಲೇರಿತು. ಬಳಿಕ ರವಿಚಂದ್ರನ್ ಮಧ್ಯ ಪ್ರವೇಶಿಸಿ ಸಂಧಾನಕ್ಕೆ ಯತ್ನಿಸಿ ವಿಫಲರಾದರು. ಇದೀಗ ಸುದೀಪ್, ಅವರು ಫಿಲಂ ಚೇಂಬರ್​ನ ಮಾಜಿ ಅಧ್ಯಕ್ಷರಾದ ಬಾಮಾ ಹರೀಶ್ ಅವರು ಆಯೋಜಿಸುತ್ತಿರುವ ನಂದಿ ಅವಾರ್ಡ್ಸ್​ 2023ಗೆ ಚಾಲನೆ ನೀಡಿ, ಕೆಲವು ಹಿತವಚನಗಳನ್ನು ಹೇಳಿದರು. ಕೊನೆಯಲ್ಲಿ ಫಿಲಂ ಚೇಂಬರ್ ಅವರನ್ನು ಎದುರು ಹಾಕಿಕೊಳ್ಳಲಾಗದು. ನಮ್ಮವರು ಎಂದು ಅಲ್ಲಿ ಕೆಲವರಾದರೂ ಇರಬೇಕಲ್ಲ ಎಂದು ಹಾಸ್ಯ ಮಾಡಿದರು. ಸುದೀಪ್ ಏನು ಹೇಳಿದರು ಎಂಬುದನ್ನು ಇಲ್ಲಿ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More