ಚಿತ್ರರಂಗದಲ್ಲಿನ ದೊಡ್ಡ ಸಮಸ್ಯೆ ಏನು ಗೊತ್ತಾ? ವಿವರಿಸಿದ ನಟ ರಮೇಶ್​​ ಅರವಿಂದ್​

Updated on: Apr 02, 2024 | 9:04 PM

‘ಚಿತ್ರರಂಗದಲ್ಲಿ ವೃತ್ತಿಪರತೆ ಬೇಕು. ಅರ್ಧ ಗಂಟೆ ಎನ್ನುವುದು ಕೂಡ ತುಂಬಾ ಮುಖ್ಯ. ಇದು ಬದಲಾದ ಸಮಯ. ಪ್ರೇಕ್ಷಕರಿಗೆ ತಮಗೆ ಬೇಕಾದ ಸಮಯದಲ್ಲಿ ಒಟಿಟಿಯಲ್ಲಿ ಕಂಟೆಂಟ್​ ಸಿಗುತ್ತಿದೆ. ಹಾಗಾಗಿ ಅವರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಆದ್ದರಿಂದ ನಾವು ಅವರ ಸಮಯಕ್ಕೆ ಗೌರವ ನೀಡಬೇಕು. ಆಗ ನಮಗೆ ಪವರ್​ ಸಿಗುತ್ತದೆ’ ಎಂದು ನಟ, ನಿರ್ದೇಶಕ ರಮೇಶ್ ಅರವಿಂದ್​ ಹೇಳಿದ್ದಾರೆ.

ನಟ ರಮೇಶ್ ಅರವಿಂದ್​ (Ramesh Aravind) ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ (Kannada Film Industry) ಆ್ಯಕ್ಟೀವ್​ ಆಗಿದ್ದಾರೆ. ಅವರ ಅನುಭವ ಅಪಾರ. ಪತ್ರಕರ್ತರ ಜೊತೆ ಅವರಿಗೆ ಬಹಳ ಕಾಲದಿಂದ ಒಡನಾಟ ಇದೆ. ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಪತ್ರಕರ್ತರ ಸಂಘ ಆಯೋಜಿಸಿದ್ದ ‘ಸಿನಿಮಾ-ಮಾಧ್ಯಮ ಸ್ಥಿತಿಗತಿ’ ಸಂವಾದ ಹಾಗೂ ಸಂಘದ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಕಾರ್ಯಕ್ರಮದಲ್ಲಿ ರಮೇಶ್​ ಅವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಆಗ ಅವರು ಅನೇಕ ವಿಚಾರಗಳನ್ನು ಹಂಚಿಕೊಂಡರು. ‘ಇಂದು ಚಿತ್ರರಂಗದಲ್ಲಿನ ದೊಡ್ಡ ಸಮಸ್ಯೆ ಏನೆಂದರೆ ಪ್ರೊಫೆಷನಲಿಸಂ ಇಲ್ಲ. ಎಷ್ಟು ಗಂಟೆಗೆ ಬರಬೇಕು ಅಂತ ಕೇಳಿದರೆ, 10-10.30ಕ್ಕೆ ಬನ್ನಿ ಅಂತ ಪ್ರೊಡಕ್ಷನ್​ ಮ್ಯಾನೇಜರ್​ ಹೇಳುತ್ತಾನೆ. 10 ಎನ್ನಬೇಕು ಅಥವಾ 10.30 ಎನ್ನಬೇಕು. ಅವೆರಡೂ ಬೇರೆ ಬೇರೆ ಸಮಯ. 10-10.30 ಎಂದರೆ ಏನು ಅರ್ಥ? ಅರ್ಧ ಗಂಟೆ ಎನ್ನುವುದು ಬಹಳ ಮುಖ್ಯ. ಈಗ ಬದಲಾದ ಸಮಯ. ಒಟಿಟಿಯಲ್ಲಿ (OTT) ಪ್ರೇಕ್ಷಕರಿಗೆ ತಮಗೆ ಬೇಕಾದ ಸಮಯದಲ್ಲಿ ಕಂಟೆಂಟ್​ ಸಿಗುತ್ತಿದೆ. ಹಾಗಾಗಿ ಅವರು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹಾಗಾಗಿ ನಾವು ಆ ಸಮಯಕ್ಕೆ ಗೌರವ ನೀಡಬೇಕು. ಆಗ ನಮಗೆ ಪವರ್​ ಸಿಗುತ್ತದೆ’ ಎಂದು ರಮೇಶ್ ಅರವಿಂದ್​ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More