ಮಳೆ ಹೊಡತಕ್ಕೆ ಚಿಕ್ಕಮಗಳೂರಿನ ಕೊಂಕಳಮನೆಯಲ್ಲಿ ಭೂಮಿ ಕುಸಿತ, ಮನೆಗಳಲ್ಲಿ ಬಿರುಕು

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Jul 20, 2022 | 1:25 PM

ಭೂಮಿ ಕುಸಿದ ಕಾರಣ ಇಲ್ಲಿದ್ದ ಕಾಂಕ್ರೀಟ್ ರಸ್ತೆ ಹಾಳಾಗಿ ಕೊಂಕಳಮನೆ ಮತ್ತು ಗಂಧರ್ವಗಿರಿ ನಡುವಿನ ಸಂಪರ್ಕ ಕಡಿದುಹೋಗಿದೆ. ಮರಗಳು ಧರೆಗುರುಳಿವೆ ಮತ್ತು ಇಲ್ಲಿನ ಹಲವಾರು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

ಚಿಕ್ಕಮಗಳೂರು: ಮಲೆನಾಡ ಭಾಗದಲ್ಲಿ (Malnad region) ಮಳೆ ಸೃಷ್ಟಿಸುತ್ತಿರುವ ಅವಾಂತರಗಳು ಒಂದೆರಡಲ್ಲ. ಚಿಕ್ಕಮಗಳೂರು ತಾಲ್ಲೂಕಿನ ಕೊಂಕಳಮನೆಯಲ್ಲಿ (Konkalumane) ಭೂಮಿ ವೃತ್ತಾಕಾರದಲ್ಲಿ ಕುಸಿದುಬಿಟ್ಟಿದೆ. ಸುಮಾರು 5 ಎಕರೆ ಪ್ರದೇಶದಲ್ಲಿ ಭೂಮಿ ಕುಸಿದ ಕಾರಣ ಇಲ್ಲಿದ್ದ ಕಾಂಕ್ರೀಟ್ ರಸ್ತೆ ಹಾಳಾಗಿ ಕೊಂಕಳಮನೆ ಮತ್ತು ಗಂಧರ್ವಗಿರಿ ನಡುವಿನ ಸಂಪರ್ಕ ಕಡಿದುಹೋಗಿದೆ. ಮರಗಳು ಧರೆಗುರುಳಿವೆ ಮತ್ತು ಇಲ್ಲಿನ ಹಲವಾರು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.

Follow Us
Web contact

TV9 Kannada

Read More