ಬೆಳಗಾವಿ: ಸುವರ್ಣಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ಸಿರಿ ಧಾನ್ಯ ಮತ್ತು ಸಾವಯವ ಮೇಳದ ಪೂರ್ವಭಾವಿ ಕಾರ್ಯಕ್ರಮದ ಉದ್ಘಾಟನೆ ಬಳಿಕ ಶಾಸಕರು, ಸಚಿವರು, ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಜೊತೆಗೂಡಿ ಉತ್ತರ ಕರ್ನಾಟಕದ ಭರ್ಜರಿ ಲಂಚ್ ಸವಿದರು. ವಿಪಕ್ಷ ನಾಯಕ (Leader of Opposition) ಆರ್ ಅಶೋಕ (R Ashoka) ಅವರು ಸಚಿವರುಗಳೊಂದಿಗೆ ಕೂತು ಊಟ ಮಾಡಿದ್ದು ವಿಶೇಷ ಅನಿಸಿತು. ದೃಶ್ಯಗಳಲ್ಲಿ ಕಾಣುತ್ತಿರುವಂತೆ ಅವರು ಎಂಸಿ ಸುಧಾಕರ್, ಡಿ ಸುಧಾಕರ್, ದಿನೇಶ್ ಗುಂಡೂರಾವ್, ಈಶ್ವರ್ ಖಂಡ್ರೆ, ಶರಣಪ್ರಕಾಶ್ ಪಾಟೀಲ್, ಹೆಚ್ ಸಿ ಮಹಾದೇವಪ್ಪ ಮತ್ತು ಜಿ ಪರಮೇಶ್ವರ್ ಅವರೊಂದಿಗೆ ಕೂತು ಊಟ ಮಾಡುತ್ತಿದ್ದಾರೆ. ಅವರ ಬದಿಯ ಟೇಬಲ್ ನಲ್ಲಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟ್ಟಿ (Basavaraj Horatti), ವಿಧಾನಸಭಾಧ್ಯಕ್ಷ ಯುಟಿ ಖಾದರ್ (UT Khader), ಹೆಚ್ ಕೆ ಪಾಟೀಲ್ ಮೊದಲಾದವರೆಲ್ಲ ಉತ್ತರ ಕರ್ನಾಟಕದ ಭಕ್ಷ್ಯಗಳನ್ನು ಸವಿಯುತ್ತಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ