ರಾಮನಗರ: ನಾಯಿಬೇಟೆಗೆ ಬಂದಿದ್ದ ಚಿರತೆ ಅದು ಸಾಧ್ಯವಾಗದೆ ವಾಪಸ್ಸು ಹೋದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Edited By: ಅರುಣ್​ ಕುಮಾರ್​ ಬೆಳ್ಳಿ

Updated on: Nov 15, 2022 | 12:36 PM

ಚಿರತೆ ಎಲ್ಲಿರಬಹುದು ಅಂತ ನೋಡಲು ಕೆಮೆರಾದ ಫ್ರೇಮಿನಲ್ಲಿ ಬರುವ ನಾಯಿ ಆದು ಕಾಣುತ್ತಲೇ ಮಂಗಮಾಯವಾಗುತ್ತದೆ.

ರಾಮನಗರ: ಜಿಲ್ಲೆಯ ಹಲವಾರು ಗ್ರಾಮಗಳಲ್ಲಿ ಚಿರತೆ (leopard) ಕಾಣಿಸಿಕೊಳ್ಳುತ್ತಿರುವ ಬಗ್ಗೆ ನಾವು ವರದಿ ಮಾಡುತ್ತಲೇ ಇರುತ್ತೇವೆ. ಸೋಮವಾರ ರಾತ್ರಿ ಚನ್ನಪಟ್ಟಣಕ್ಕೆ (Channapatna) ಹತ್ತಿರದ ಗೊಲ್ಲರದೊಡ್ಡಿಯಲ್ಲಿರುವ ತೋಟದ ಮನೆಯ ಕಂಪೌಂಡ್ ಒಳಗಿದ್ದ ನಾಯಿಯನ್ನು (dog) ಬೇಟೆಯಾಡುವ ಉದ್ದೇಶದಿಂದ ಚಿರತೆ ಪ್ರವೇಶಿಸಿದ್ದು ಅಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಚಿರತೆ ಕಂಪೌಂಡ್ ನೊಳಗೆ ಪ್ರವೇಶಿದ ವಾಸನೆ ನಾಯಿಯ ಮೂಗಿಗೆ ಅಡರಿದೆ ಅನಿಸುತ್ತೆ. ಅದು ಎಲ್ಲಿರಬಹುದು ಅಂತ ನೋಡಲು ಕೆಮೆರಾದ ಫ್ರೇಮಿನಲ್ಲಿ ಬರುವ ನಾಯಿ ಆದು ಕಾಣುತ್ತಲೇ ಮಂಗಮಾಯವಾಗುತ್ತದೆ. ಬಂದದಾರಿಗೆ ಸುಂಕವಿಲ್ಲ ಎಂಬಂತೆ ಚಿರತೆ ಅಲ್ಲಿಂದ ವಾಪಸ್ಸು ಹೋಗುತ್ತದೆ.

Follow Us
Web contact

TV9 Kannada

Read More