ಮೊದಲ ಚಿತ್ರದಲ್ಲೇ ದರ್ಶನ್​ ಕುತ್ತಿಗೆಗೆ ಮಚ್ಚು ಇಟ್ಟ ಮಾಲಾಶ್ರೀ ಪುತ್ರಿ ಆರಾಧನಾ

| Updated By: ಮದನ್​ ಕುಮಾರ್​

Updated on: Sep 12, 2023 | 2:32 PM

ಬಹುನಿರೀಕ್ಷಿತ ‘ಕಾಟೇರ’ ಸಿನಿಮಾಗೆ ಆರಾಧನಾ ನಾಯಕಿ. ಈ ಚಿತ್ರದ ಶೂಟಿಂಗ್​ ವೇಳೆ ಮೊದಲ ದೃಶ್ಯವೇ ಅವರಿಗೆ ಚಾಲೆಂಜಿಂಗ್​ ಆಗಿತ್ತು. ನಟ ದರ್ಶನ್​ ಅವರ ಕುತ್ತಿಗೆಗೆ ಮಚ್ಚು ಇಟ್ಟು ಆರಾಧನಾ ನಟಿಸಬೇಕಿತ್ತು. ಈ ದೃಶ್ಯಕ್ಕೆ ದರ್ಶನ್​ ಅಭಿಮಾನಿಗಳು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು. ಆ ಬಗ್ಗೆ ಅವರು ಮಾತನಾಡಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ (Malashree) ಅವರು ದೊಡ್ಡ ಸಾಧನೆ ಮಾಡಿದ್ದಾರೆ. ಈಗ ಅವರ ಪುತ್ರಿ ಆರಾಧನಾ ‘ಕಾಟೇರ’ ಸಿನಿಮಾ (Kaatera Movie) ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಮೊದಲ ಸಿನಿಮಾದಲ್ಲೇ ಅವರು ದರ್ಶನ್​ ಜೊತೆ ನಟಿಸುವ ಅವಕಾಶ ಪಡೆದಿದ್ದಾರೆ. ಅಚ್ಚರಿ ಏನೆಂದರೆ, ಈ ಸಿನಿಮಾದ ಶೂಟಿಂಗ್​ ವೇಳೆ ಮೊದಲ ದೃಶ್ಯವೇ ಅವರಿಗೆ ಚಾಲೆಂಜಿಂಗ್​ ಆಗಿತ್ತು. ದರ್ಶನ್​ (Darshan) ಕುತ್ತಿಗೆಗೆ ಮಚ್ಚು ಇಟ್ಟು ಆರಾಧನಾ ನಟಿಸಬೇಕಿತ್ತು. ಆ ದೃಶ್ಯಕ್ಕೆ ದರ್ಶನ್​ ಅಭಿಮಾನಿಗಳು ಹೇಗೆ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕು. ‘ಮೊದಲ ಸಿನಿಮಾದಲ್ಲೇ ಸೂಪರ್​ ಸ್ಟಾರ್​ ಜೊತೆ ನಟಿಸಿದ್ದು ನನ್ನ ಅದೃಷ್ಟ. ನಾನು ನರ್ವಸ್​ ಆಗಿದ್ದೆ. ಆದರೆ ಅವರ ಸಹಕಾರದಿಂದ ಸುಲಭವಾಗಿ ನಟಿಸಲು ಸಾಧ್ಯವಾಯ್ತು’ ಎಂದು ಆರಾಧನಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on