ಬೆಂಗಳೂರು, ಸೆ.15: ದಾಸರಹಳ್ಳಿಯಲ್ಲಿ ಬೀಗರ ಊಟಕ್ಕೆ ರೆಡಿಯಾಗುತ್ತಿದ್ದ ಮಟನ್ ಕದ್ದು ವ್ಯಕ್ತಿ ಪರಾರಿಯಾಗಿರುವ ಘಟನೆ ನಡೆದಿದೆ. ಟಿ.ದಾಸರಹಳ್ಳಿಯಲ್ಲಿ ರಾಕೇಶ್ ಮತ್ತು ಅನಿತಾ ದಂಪತಿಯ ಮದುವೆಯ ಬೀಗರ ಊಟದ ಕಾರ್ಯಕ್ರಮದ ಸಮಯದಲ್ಲಿ ಕಳ್ಳ ಕರಾಮತ್ತು ತೋರಿಸಿದ್ದಾನೆ. ಸಹಾಯ ಮಾಡುವ ನಿಟ್ಟಿನಲ್ಲಿ ಆಗಮಿಸಿ ಬಳಿಕ ತಾನು ತಂದಿದ್ದ ಕವರ್ನಲ್ಲಿ ಮಟನ್ ಎಗರಿಸಿ ಪರಾರಿಯಾಗಿದ್ದಾನೆ. ಕಿಲಾಡಿ ವಸಂತ್ ಮಟನ್ ಎಗರಿಸಿ ಪರಾರಿಯಾಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇದರ ಮೇಲೆ ಕ್ಲಿಕ್ ಮಾಡಿ