ಮಂಡ್ಯ ರೈತರಿಗೆ ಸಿಗುತ್ತಿಲ್ಲ ಕನ್ಯೆ: ಕಂಕಣ ಭಾಗ್ಯಕ್ಕಾಗಿ ಮಹದೇಶ್ವರ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ

| Updated By: ವಿವೇಕ ಬಿರಾದಾರ

Updated on: Mar 17, 2025 | 9:09 AM

ಮಂಡ್ಯ ಜಿಲ್ಲೆಯ ಅವ್ವೇರಹಳ್ಳಿ ಗ್ರಾಮದ ರೈತ ಮಕ್ಕಳಿಗೆ ಹೆಣ್ಣು ಕೊಡುತ್ತಿಲ್ಲ. ಹೀಗಾಗಿ, 15ಕ್ಕೂ ಹೆಚ್ಚು ಬ್ರಹ್ಮಚಾರಿಗಳು ಮಲೆ ಮಹದೇಶ್ವರನ ಕೃಪೆಗಾಗಿ ಪಾದಯಾತ್ರೆ ಹೊರಟಿದ್ದಾರೆ. ಅವ್ವೇರಹಳ್ಳಿ‌ ಗ್ರಾಮವೊಂದರಲ್ಲೇ 50 ಕ್ಕೂ‌ ಹೆಚ್ಚು ಮಂದಿ ಅವಿವಾಹಿತರಿದ್ದಾರೆ. ಯಾರಿಗೂ ‌ಹೆಣ್ಣು ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದು ರೈತರ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಯನ್ನು ಎತ್ತಿ ತೋರಿಸುತ್ತದೆ.

ಮಂಡ್ಯ, ಮಾರ್ಚ್​ 17: ಬೆಳೆದ ಬೆಳೆಗೂ ಸರಿಯಾದ ಬೆಲೆ ಇಲ್ಲ, ಇತ್ತ ಮದುವೆಗೆ ಹೆಣ್ಣು ಸಿಗುತ್ತಿಲ್ಲ. ಮಂಡ್ಯ ಜಿಲ್ಲೆಯ ರೈತರ ಮಕ್ಕಳಿಗೆ ಗೋಳು ತಪ್ಪುತ್ತಿಲ್ಲ. ರೈತರು ಎಂಬ ಕಾರಣಕ್ಕೆ ಕನ್ಯೆ ಕೊಡುತ್ತಿಲ್ಲವಂತೆ. ಹೀಗಾಗಿ, ಕಂಕಣ ಭಾಗ್ಯಕ್ಕಾಗಿ ಹೆಣ್ಣು ಸಿಗಲೆಂದು ಹರಕೆಹೊತ್ತು ಮಹದೇಶ್ವರ ಬೆಟ್ಟಕ್ಕೆ ಮಂಡ್ಯ ತಾಲೂಕಿನ ಅವ್ವೇರಹಳ್ಳಿ ಗ್ರಾಮದ ಬ್ರಹ್ಮಚಾರಿಗಳು ಪಾದಯಾತ್ರೆ ಹೊರಟಿದ್ದಾರೆ. 15ಕ್ಕೂ ಹೆಚ್ಚು ಬ್ರಹ್ಮಚಾರಿಗಳು ಪಾದಯಾತ್ರೆ ಮಾಡುತ್ತಿದ್ದಾರೆ. ಅವ್ವೇರಹಳ್ಳಿ‌ ಗ್ರಾಮವೊಂದರಲ್ಲೇ 50 ಕ್ಕೂ‌ ಹೆಚ್ಚು ಮಂದಿ ಅವಿವಾಹಿತರಿದ್ದಾರೆ. ಯಾರಿಗೂ ‌ಹೆಣ್ಣು ಸಿಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಮಲೆ ಮಹದೇಶ್ವರನ ಕೃಪೆಗಾಗಿ ಪಾದಯಾತ್ರೆ ಹೊರಟಿದ್ದಾರೆ.