ಈ ಬಾರಿ ಉತ್ತಮ ಮಳೆ ಇದೆ: ರೈತರಿಗೆ ಆತ್ಮ ಸ್ಥೈರ್ಯ ತುಂಬಿದ ಮಂತ್ರಾಲಯ ಶ್ರೀ

| Updated By: ರಮೇಶ್ ಬಿ. ಜವಳಗೇರಾ

Updated on: Jul 05, 2023 | 2:19 PM

ಮಳೆ ಇಲ್ಲದೇ ಕಂಗಾಲಾಗಿರುವ ರೈತಾಪಿ ವರ್ಗಕ್ಕೆ ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆತ್ಮ ಸ್ಥೈರ್ಯ ತುಂಬಿದ್ದಾರೆ.

ರಾಯಚೂರು: ಜೂನ್​​ನಲ್ಲಿ ಕೈಕೊಟ್ಟು ರೈತರನ್ನು ಕಂಗಾಲು ಮಾಡಿದ್ದ ಮಳೆ ಇದೀಗ ಜುಲೈ ಆರಂಭವಾಗುತ್ತಿದ್ದಂತೆಯೇ ರಾಜ್ಯದೆಲ್ಲೆಡೆ ವರುಣನ ಅಬ್ಬರ ಜೋರಾಗಿದೆ. ಇನ್ನು ಉತ್ತರ ಕರ್ನಾಟಕದ ಕೆಲವೆಡೆ ಮಳೆ ಇಲ್ಲದೇ ರೈತರು ಬಿತ್ತನೆ ಮಾಡದೇ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿದ್ದಾರೆ. ಇದೀಗ ಈ ರೈತರಿಗೆ ಮಂತ್ರಾಲಯದ ಪೀಠಾಧಿಪತಿ ಡಾ.ಸುಬುಧೇಂದ್ರ ತೀರ್ಥರು ಆತ್ಮ ಸ್ಥೈರ್ಯ ತುಂಬಿದ್ದಾರೆ. ಈ ಬಾರಿ ಉತ್ತಮ ಮಳೆ ಇದೆ. ದೇಶದ ಬೆನ್ನೆಲುಬು ಆಗಿರುವ ರೈತಾಪಿ ಜನ ಕಂಗೇಡುವುದು ಬೇಡ. ಅಧೈರ್ಯವಾಗಿರೋದು ಬೇಡ. ನಾವೆಲ್ಲರೂ ಆಶಾವಾದಿಗಳಾಗೋಣ. ಭಗವಂತನನ್ನ ನಂಬೋಣ. ಉತ್ತಮ ಮಳೆ ಆಗತ್ತೆ,ಬೆಳೆ ಆಗತ್ತೆ.. ಆ ಮೂಲಕ ರೈತಾಪಿ ಜನ ಆತ್ಮ ಧೈರ್ಯ ಕಳೆದುಕೊಳ್ಳಬಾರದು ಎಂದು ಡಾ.ಸುಬುಧೇಂದ್ರ ತೀರ್ಥರು ರೈತರಿಗೆ ಆತ್ಮ ಸ್ಥೈರ್ಯ ತುಂಬಿದ್ದಾರೆ.

Published On - 2:18 pm, Wed, 5 July 23

Follow us on