Karnataka Assembly Polls Results: ಮೈಸೂರಲ್ಲಿ ಸಿದ್ದರಾಮಯ್ಯ ಅಭಿಮಾನಿಗಳ ಸಂಭ್ರಮ, ಮಂಗಳಮಖಿಯರಿಗೆ ಹಣ ನೀಡಿದ ಮಾಜಿ ಮುಖ್ಯಮಂತ್ರಿ!

Updated on: May 13, 2023 | 5:52 PM

ಕೆಲ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ರಾಮಣ್ಣಂಗೆ ಜೈ ಅಂತಲೂ ಕೂಗುತ್ತಿದ್ದರು

ಮೈಸೂರು: ಸಿದ್ದರಾಮಯ್ಯನವರ (Siddaramaiah) ಮನೆ ಮುಂದೆ ಅಭಿಮಾನಿಗಳ ಸಂಭ್ರಮ ಪದಗಳಲ್ಲಿ ಹೇಳಲಾಗದು ಅನಿಸುತ್ತದೆ. ಜನ ಆವೇಶದಲ್ಲಿ ಸಿದ್ರಾಮಣ್ಣಂಗೆ ಜೈ, ಯತೀಂದ್ರಣ್ಣಂಗೆ (Yathindra Siddaramaiah) ಜೈ ಅಂತ ಕೂಗುತ್ತಿಲ್ಲ, ಅರಚುತ್ತಿದ್ದ್ದಾರೆ. ಸಿದ್ದರಾಮಯ್ಯ ಮನೆಯಿಂದ ಹೊರಬಂದು ಕಾರು ಹತ್ತಲು ಸಹ ಜನ ಬಿಡುತ್ತಿಲ್ಲ. ಅವರನ್ನು ಅಭಿನಂದಿಸಲು ಮಂಗಳಮುಖಿಯರು (transgenders) ಸಹ ಬಂದಿದ್ದಾರೆ. ವೈಯಕ್ತಿಕ ಗೆಲುವು ಮತ್ತು ಪಕ್ಷದ ಅಮೋಘ ಸಾಧನೆಯಿಂದ ಬೀಗುತ್ತಿರುವ ಸಿದ್ದರಾಮಯ್ಯ ಮಂಗಳಮುಖಿಯರಿಗೆ ಹಣ ನೀಡಿದ್ದಾರೆ. ಕೆಲ ಅಭಿಮಾನಿಗಳು ಮುಖ್ಯಮಂತ್ರಿ ಸಿದ್ರಾಮಣ್ಣಂಗೆ ಜೈ ಅಂತಲೂ ಕೂಗುತ್ತಿದ್ದಾರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More