ಗದಗ: ಚುನಾವಣಾ ಆಯೋಗ (Election Commission) ಇಂದು ರಾಜ್ಯ ವಿಧಾನಸಭಾ ಚುನಾವಣೆಗೆ ದಿನಾಂಕ ಪ್ರಕಟಿಸಿದ ಬಳಿಕ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವೀ ಸೂರ್ಯ (Tejasvi Surya), ಚುನಾವಣೆಯು ಪ್ರಜಾಪ್ರಭುತ್ವದ (democracy) ಒಂದು ದೊಡ್ಡ ಹಬ್ಬವಾಗಿದೆ, ರಾಜ್ಯದ ಜನತೆ 5-ವರ್ಷಗಳ ಅವಧಿಗೆ ಒಂದು ಸರ್ಕಾರವನ್ನು ಅಯ್ಕೆ ಮಾಡುವ ಮಹತ್ವದ ಸಂದರ್ಭ ಎಂದು ಹೇಳಿದರು. ತಾನು ಹಳೆ ಮೈಸೂರು ಭಾಗ, ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ-ಎಲ್ಲ ಕಡೆ ಸುತ್ತಾಡಿದ್ದು ಬಿಜೆಪಿ ಪರ ಒಂದು ದೊಡ್ಡ ಅಲೆಯಿದ್ದು ಪಕ್ಷ ಸಂಪೂರ್ಣ ಬಹುಮತದೊಂದಿಗೆ ಅಧಿಕಾರ ಉಳಿಸಿಕೊಳ್ಳಲಿದೆ ಎಂದು ತೇಜಸ್ವೀ ಸೂರ್ಯ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ