Video: ಭೀಕರ ಬರದ ನಡುವೆಯೂ ಶಾಸಕ ವಿಶ್ವಾಸ್ ವೈದ್ಯರಿಂದ ಅದ್ಧೂರಿ ಹುಟ್ಟುಹಬ್ಬ ಆಚರಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 12, 2023 | 11:04 PM

ಬಿಸಿಲು ಭೂಮಿಯನ್ನೇ ಬೇಯಿಸುತ್ತಿದೆ. ಮಳೆ ಇಲ್ಲದೇ ಬೆಳೆಗಳು ನೆಲಕ್ಕಚ್ಚುತ್ತಿವೆ. ಭಿತ್ತಿದ್ದ ಬೆಳೆಯನ್ನ ರೈತರೇ ನಾಶ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಆವರಸಿರುವ ಇಂತಹ ಸಂದರ್ಭದಲ್ಲಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಶ್ವಾಸ್ ವೈದ್ಯರಿಂದ ಅದ್ಧೂರಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ.

ಬೆಳಗಾವಿ, ಅಕ್ಟೋಬರ್​​​ 12: ಬಿಸಿಲು ಭೂಮಿಯನ್ನೇ ಬೇಯಿಸುತ್ತಿದೆ. ಮಳೆ ಇಲ್ಲದೇ ಬೆಳೆಗಳು ನೆಲಕ್ಕಚ್ಚುತ್ತಿವೆ. ಭಿತ್ತಿದ್ದ ಬೆಳೆಯನ್ನ ರೈತರೇ ನಾಶ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಬರಗಾಲ ಆವರಸಿರುವ ಇಂತಹ ಸಂದರ್ಭದಲ್ಲಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಶ್ವಾಸ್ ವೈದ್ಯ (Vishwas Vaidya) ರಿಂದ ಅದ್ಧೂರಿ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಸವದತ್ತಿ ಪಟ್ಟಣದಲ್ಲಿರುವ ಶಾಸಕರ ನಿವಾಸದಲ್ಲಿ ಹುಟ್ಟುಹಬ್ಬ ಆಚರಣೆ ಮಾಡಲಾಗಿದೆ. ಆನೆ ಮೂಲಕ ಶಾಸಕ ವಿಶ್ವಾಸ್ ವೈದ್ಯಗೆ ಕಾರ್ಯಕರ್ತರು ಹಾರಹಾಕಿಸಿದ್ದಾರೆ. ಕುಂಭ ಹೊತ್ತ ಮಹಿಳೆಯರ ಮೆರವಣಿಗೆ, ಲಂಬಾಣಿ ಮಹಿಳೆಯರಿಂದ ನೃತ್ಯ ಮಾಡಲಾಗಿದೆ. ಬಳಿಕ ಎಲ್ಲ ಕಾರ್ಯಕರ್ತರಿಗೆ ಶಾಸಕ ವಿಶ್ವಾಸ್ ವೈದ್ಯ ಊಟದ ವ್ಯವಸ್ಥೆ ಮಾಡಿಸಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Follow us on