Karnataka Assembly Polls: ಹೊಸಕೋಟೆಯಲ್ಲಿ ಬಿಜೆಪಿ-ಕಾಂಗ್ರೆಸ್ ಬೆಂಬಲಿಗರ ನಡುವೆ ಕಿತ್ತಾಟ, ಎದುರಾಳಿಗಳನ್ನು ಎಚ್ಚರಿಸಿದ ಎಂಟಿಬಿ ನಾಗರಾಜ್

Updated on: May 04, 2023 | 5:21 PM

ಹೊಸಕೋಟೆಯಲ್ಲಿ ಗೂಂಡಾಗಿರಿ, ದಾದಾಗರಿ ಮಾಡಿದರೆ ಕ್ಷೇತ್ರದಿಂದ ಓಡಿಸಬೇಕಾಗುತ್ತದೆ ಎಂದು ನಾಗರಾಜ್ ಎಚ್ಚರಿಸಿದರು.

ಹೊಸಕೋಟೆ: ಮತದಾನದ ದಿನ ಹತ್ತಿರವಾಗುತ್ತಿದ್ದಂತೆಯೇ ಪೋಲಿಸರಿಗೆ ತಲೆಬಿಸಿ ಜಾಸ್ತಿಯಾಗುತ್ತಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶರತ್ ಬಚ್ಚೇಗೌಡ (Sharath Bachegowda) ಮತ್ತು ಬಿಜೆಪಿಯ ಎಮ್ ಟಿಬಿ ನಾಗರಾಜ್ (MTB Nagaraj) ಬೆಂಬಲಿಗರ ನಡುವೆ ಬೀದಿ ಜಗಳಗಳು ಶುರುವಾಗಿವೆ. ಇವತ್ತು ನಡೆದ ಗಲಾಟೆಯ ಬಳಿಕ ನಾಗರಾಜ್ ಮೈಕ್ ಮೂಲಕ ಶರತ್ ಮತ್ತು ಅವರ ಬೆಂಬಲಿಗರಿಗೆ ಸವಾಲೆಸೆಯುತ್ತಿರುವುದನ್ನು ನೋಡಬಹುದು. ಹೊಸಕೋಟೆ ಕ್ಷೇತ್ರದಿಂದ ಮೂರು ಬಾರಿ ವಿಧಾನಸಭೆ (assembly) ಆಯ್ಕೆಯಾಗಿ ಅದನ್ನು ಅಭಿವೃದ್ಧಿಪಡಿಸಿ ಆಸ್ಪತ್ರೆ, ರಸ್ತೆ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು ತಾನು ಎಂದು ನಾಗರಾಜ್ ಹೇಳುತ್ತಿದ್ದಾರೆ. ಹೊಸಕೋಟೆಯಲ್ಲಿ ಗೂಂಡಾಗಿರಿ, ದಾದಾಗರಿ ಮಾಡಿದರೆ ಕ್ಷೇತ್ರದಿಂದ ಓಡಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸುತ್ತಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More