ಮೈಸೂರು: ನಗರದ ಇಂದಿರಾ ಕ್ಯಾಂಟೀನ್ ಗಳಿಗೆ (Indira canteen) ಇಂದು ಭೇಟಿ ನೀಡಿದವರಿಗೆ ಹೋಳಿಗೆ ಊಟ, ಅದಕ್ಕೆ ಕಾರಣವೂ ವಿಶಿಷ್ಟ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಸುಪುತ್ರ ಮತ್ತು ವರುಣಾದ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯನವರಿಗೆ (Yatindra Siddaramaiah) ಇಂದು ಹುಟ್ಟುಹಬ್ಬ. ಯತೀಂದ್ರ ಮತ್ತು ಸಿದ್ದರಾಮಯ್ಯ ಅಭಿಮಾನಿಗಳ ಜೊತೆಗೆ ಪಕ್ಷದ ಕಾರ್ಯಕರ್ತರು ಇಂದಿರಾ ಕ್ಯಾಂಟೀನ್ ಗಳಿಗೆ ಊಟಕ್ಕೆ ಬಂದವರಿಗೆ ಸಿಹಿ ರೂಪದಲ್ಲಿ ಹೋಳಿಗೆ ತಿನ್ನಿಸಿ ಹುಟ್ಟುಹಬ್ಬ ಆಚರಿಸಿದರು. ಯತೀಂದ್ರ ಈಗ ಅಧಿಕಾರದಲ್ಲಿರದಿದ್ರೂ ಮೈಸೂರು ಜಿಲ್ಲೆಯಲ್ಲಿ ಭಾರೀ ಜನಪ್ರಿಯರು. ಈ ಬಾರಿ ಲೋಕ ಸಭಾ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಿಂದ ಅವರನ್ನು ಕಣಕ್ಕಿಳಿಸುವ ಯೋಚನೆ ಕೂಡ ಕಾಂಗ್ರೆಸ್ ನಾಯಕರಿಗಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ