Daily Devotional: ನವರಾತ್ರಿಯ 6ನೇ ದಿನ, ಸ್ಕಂದಮಾತೆಗೆ ಯಾವ ನೈವೇದ್ಯ ಅರ್ಪಿಸಬೇಕು?

Updated on: Sep 27, 2025 | 6:51 AM

ನವರಾತ್ರಿ ಮಹೋತ್ಸವದಲ್ಲಿ ಸ್ಕಂದಮಾತಾ ದೇವಿಯ ಆರಾಧನೆ ವಿಶೇಷವಾಗಿದೆ. ಪಂಚಮಿ ತಿಥಿಯಂದು ಆಚರಿಸಲಾಗುವ ಈ ಪೂಜೆಯಲ್ಲಿ ದೇವಿಗೆ ಕೋಸಂಬರಿ, ಚಿತ್ರಾನ್ನ ಮತ್ತು ಸಬ್ಬಕ್ಕಿ ಪಾಯಸವನ್ನು ನೈವೇದ್ಯವಾಗಿ ಅರ್ಪಿಸಬಹುದು. ಓಂ ಐಮ್ ಹ್ರೀಮ್ ಶ್ರೀಮ್ ಸ್ಕಂದ ಮಾತಾಯೈ ನಮಃ ಮಂತ್ರ ಜಪಿಸುವುದರಿಂದ ಜ್ಞಾನ ಮತ್ತು ಆಲೋಚನಾ ಶಕ್ತಿ ವೃದ್ಧಿಯಾಗುತ್ತದೆ.

ಬೆಂಗಳೂರು, ಸೆಪ್ಟೆಂಬರ್ 27: ನವರಾತ್ರಿಯ ಶುಭ ಸಂದರ್ಭದಲ್ಲಿ ನವದುರ್ಗೆಯರ ಆರಾಧನೆಯು ಬಹಳ ಮಹತ್ವವನ್ನು ಪಡೆದುಕೊಂಡಿದೆ. ಪಂಚಮಿ ತಿಥಿಯಂದು ಸ್ಕಂದಮಾತಾ ದೇವಿಯ ಪೂಜೆಯನ್ನು ನಡೆಸಲಾಗುತ್ತದೆ. ಸ್ಕಂದಮಾತಾ ಎಂದರೆ ಸಾಕ್ಷಾತ್ ಸುಬ್ರಹ್ಮಣ್ಯನ ತಾಯಿ. ಆಕೆಯನ್ನು ಷಣ್ಮುಖನ ತಾಯಿ ಎಂದೂ ಕರೆಯಲಾಗುತ್ತದೆ. ನಾಲ್ಕು ಭುಜಗಳು ಮತ್ತು ನಾಲ್ಕು ಹಸ್ತಗಳನ್ನು ಹೊಂದಿರುವ ಈ ದೇವಿ ಸಿಂಹ ವಾಹನೆಯಾಗಿದ್ದಾಳೆ. ಸ್ಕಂದಮಾತಾ ದೇವಿಗೆ ಹಳದಿ ಅಥವಾ ಚಿನ್ನದ ಬಣ್ಣದ ವಸ್ತ್ರಗಳನ್ನು ಅಲಂಕಾರವಾಗಿ ಅರ್ಪಿಸುವುದು ಶ್ರೇಷ್ಠ. ಪೂಜೆಯ ಸಂದರ್ಭದಲ್ಲಿ ಕೋಸಂಬರಿ, ಚಿತ್ರಾನ್ನ ಮತ್ತು ಸಬ್ಬಕ್ಕಿ ಪಾಯಸವನ್ನು ನೈವೇದ್ಯವಾಗಿ ಅರ್ಪಿಸುವುದು ವಾಡಿಕೆ.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More