ಹಿಂದೂ ಧರ್ಮದಲ್ಲಿ ಕುಲ, ಗೋತ್ರ, ನಕ್ಷತ್ರ ಮತ್ತು ರಾಶಿ ಒಬ್ಬ ವ್ಯಕ್ತಿಯ ಆಗು ಹೋಗುಗಳನ್ನು ನಿರ್ಧರಿಸುತ್ತವೆ. ದೇವಸ್ಥಾನಕ್ಕೆ ಹೋದ ಸಮಯದಲ್ಲಿ ಅಲ್ಲಿ ಅರ್ಚಕರು ನಿಮ್ಮ ಗೋತ್ರ ಯಾವುದು ಎಂದು ಕೇಳುತ್ತಾರೆ. ಈ ವೇಳೆ ಕೆಲವರು ಗೊತ್ತಿಲ್ಲ ಅಂತಾರೆ. ಋಷಿ ಮುನಿಗಳ ಸಂತತಿಯನ್ನೇ ಗೋತ್ರ ಎನ್ನುವರು. ಹೆಚ್ಚಾಗಿ ಬ್ರಾಹ್ಮಣ ವರ್ಗ ಮತ್ತು ಕ್ಷತ್ರಿಯ ವರ್ಗದವರಿಗೆ ಗೋತ್ರ ಬಗ್ಗೆ ಮಾಹಿತಿ ಸಿಗುತ್ತದೆ. ಬೇರೆ ಯಾರಿಗೂ ಗೋತ್ರದ ಬಗ್ಗೆ ಮಾಹಿತಿ ಸಿಗುವುದಿಲ್ಲ. ಆದರೆ ದೇವಸ್ಥಾನದಲ್ಲಿ ನಿಮ್ಮ ಹೆಸರಲ್ಲಿ ಪೂಜೆ ಮಾಡುವಾಗ ನಿಮ್ಮ ಹೆಸರು, ಜನ್ಮ ನಕ್ಷತ್ರ ಮತ್ತು ಗೋತ್ರ ವಿಚಾರಿಸಿ ನಂತರ ಸಂಕಲ್ಪ ಮಾಡುವರು. ಕೆಲವರಿಗೆ ತಮ್ಮ ಗೋತ್ರದ ಬಗ್ಗೆ ಯಾವುದೇ ಅರಿವು ಇಲ್ಲದೆ ಚಡಪಡಿಕೆ ಉಂಟಾಗುತ್ತದೆ. ಮನೆಯ ಹಿರಿಯರಿಗೂ ತಿಳಿಯದಿದ್ದಾಗ ಗಾಬರಿಪಡುವ ಅಗತ್ಯವಿಲ್ಲ. ಏಕೆಂದರೆ ಜನ್ಮ ನಕ್ಷತ್ರಗಳ ಮೂಲಕವೂ ತಿಳಿಯಬಹುದು.