ಗುಂಡ್ಲುಪೇಟೆ ಬಳಿ ಮುಂಭಾಗದ ಆಕ್ಸೆಲ್ ಮುರಿದು ಕೆಎಸ್ಸಾರ್ಟಿಸಿ ಬಸ್ ಮುಗುಚಿದರೂ ಪ್ರಯಾಣಿಕರು ಸೇಫ್

|

Updated on: Aug 29, 2024 | 7:03 PM

ಬಸ್ಸಲ್ಲಿದ್ದ ಪ್ರಯಾಣಿಕರೆಲ್ಲ ಕೆಳಗಿಳಿದು ಬಸ್ಸಿಗೆ ಸಂಭವಿಸಿದ ಅವಸ್ಥೆಯನ್ನು ಗಮನಿಸುತ್ತಿದ್ದಾರೆ. ಪ್ರಯಾಣಿಕರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳು, ಪ್ರಾಯಶಃ ಶಾಲಾ ಕಾಲೇಜುಗಳನ್ನು ಅಟೆಂಡ್ ಮಾಡಿ ವಾಪಸ್ಸು ಮನೆಗೆ ಹೋಗುವಾಗ ಅಪಘಾತ ಸಂಭವಿಸಿದೆ.

ಚಾಮರಾಜನಗರ: ಚಲಿಸುವ ಬಸ್ ಮತ್ತು ಕಾರುಗಳ ಮುಂಭಾಗದ ಆಕ್ಸೆಲ್ ಮುರಿದಾಗ ದೊಡ್ಡ ಪ್ರಮಾಣದ ಅಪಘಾತ ಜರುಗುವ ಸಾಧ್ಯತೆ ಹೆಚ್ಚಿರುತ್ತದೆ. ಅದರೆ ಗುಂಡ್ಲುಪೇಟೆಯಿಂದ ಬಾಚಹಳ್ಳಿಗೆ ಹೋಗುತ್ತಿದ್ದ ಈ ಕೆಎಸ್ ಅರ್ ಟಿಸಿ ಬಸ್ಸಲ್ಲಿ ಪ್ರಯಾಣಿಸುತ್ತಿದ್ದವರು ಅದೃಷ್ಟವಂತರು. ಕೋಡಹಳ್ಳಿ ಹೆಸರಿನ ಗ್ರಾಮದ ಬಳಿ ಬಸ್ಸಿನ ಮುಂಭಾಗದ ಆಕ್ಸೆಲ್ ಕಟ್ ಆಗಿ ಚಕ್ರ ಕಿತ್ತಿಬಂದು ವಾಹನ ಮಗುಚಿದರೂ ಪ್ರಯಾಣಿಕರು, ಚಾಲಕ ಮತ್ತು ನಿರ್ವಾಹಕನಿಗೆ ಗಾಯಗಳಾಗಿಲ್ಲ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Ladakh Accident: ಲಡಾಖ್‌ಗೆ ತೆರಳುತ್ತಿದ್ದ ಬಸ್ ಕಮರಿಗೆ ಉರುಳಿ 6 ಜನ ಸಾವು, 22 ಮಂದಿಗೆ ಗಾಯ

Follow us on