Video: ಯುಪಿಐ ಪಾವತಿ ವಿಫಲ, ಸಮೋಸಾ ತಿಂದು ಕೈ ಒರೆಸಿ ಓಡಿ ರೈಲು ಹತ್ತಲು ಯತ್ನಿಸಿದ ಯುವಕ, ಆಗಿದ್ದೇನು?

Updated on: Oct 20, 2025 | 10:36 AM

ಜಬಲ್ಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಸಮೋಸಾ ಖರೀದಿಸಿದ್ದರು. ಆದರೆ ಯುಪಿಐ ಪಾವತಿ ವಿಫಲವಾಗಿತ್ತು. ಆದರೆ ಹಣ ಕೊಡದೆ ರೈಲು ಹತ್ತಿ ಓಡಿ ಹೋಗಲು ಯತ್ನಿಸಿದ ವ್ಯಕ್ತಿಯನ್ನು ಮಾರಾಟಗಾರ ಹಿಡಿದೆಳೆದು ಅವರ ಕೈಯಿಂದ ವಾಚ್ ಕಸಿದುಕೊಂಡು ಕಳುಹಿಸಿರುವ ಘಟನೆ ವರದಿಯಾಗಿದೆ. ಪ್ರಯಾಣಿಕ 10 ರೂ.ಗಳ ಸಮೋಸಾ ಖರೀದಿಸಿದ್ದ. ರೈಲು ಹೊರಡಲು ಪ್ರಾರಂಭಿಸಿದಾಗ ಯುಪಿಐ ಮೂಲಕ ಹಣ ಪಾವತಿಸಲು ಪ್ರಯತ್ನಿಸಿದ್ದ, ಆದರೆ ಅದು ವಿಫಲವಾಗಿತ್ತು.

ನವದೆಹಲಿ, ಅಕ್ಟೋಬರ್ 20: ಜಬಲ್ಪುರ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಸಮೋಸಾ ಖರೀದಿಸಿದ್ದರು. ಆದರೆ ಯುಪಿಐ ಪಾವತಿ ವಿಫಲವಾಗಿತ್ತು. ಆದರೆ ಹಣ ಕೊಡದೆ ರೈಲು ಹತ್ತಿ ಓಡಿ ಹೋಗಲು ಯತ್ನಿಸಿದ ವ್ಯಕ್ತಿಯನ್ನು ಮಾರಾಟಗಾರ ಹಿಡಿದೆಳೆದು ಅವರ ಕೈಯಿಂದ ವಾಚ್ ಕಸಿದುಕೊಂಡು ಕಳುಹಿಸಿರುವ ಘಟನೆ ವರದಿಯಾಗಿದೆ. ಪ್ರಯಾಣಿಕ 10 ರೂ.ಗಳ ಸಮೋಸಾ ಖರೀದಿಸಿದ್ದ. ರೈಲು ಹೊರಡಲು ಪ್ರಾರಂಭಿಸಿದಾಗ ಯುಪಿಐ ಮೂಲಕ ಹಣ ಪಾವತಿಸಲು ಪ್ರಯತ್ನಿಸಿದ್ದ, ಆದರೆ ಅದು ವಿಫಲವಾಗಿತ್ತು. ಆತುರದಿಂದ ರೈಲಿನೆಡೆಗೆ ಓಡಿದ್ದಾನೆ. ಸಂದೀಪ್ ಎಂಬ ಮಾರಾಟಗಾರ ಆತನ ಕಾಲರ್ ಹಿಡಿದು ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಮತ್ತೊಮ್ಮೆ ವಹಿವಾಟು ಮಾಡಲು ಪ್ರಯತ್ನಿಸಿದರೂ ಮತ್ತೆ ವಿಫಲವಾಯಿತು. ನಗದು ಇರಲಿಲ್ಲ, ಸಮಯವೂ ಇರಲಿಲ್ಲ ಹೀಗಾಗಿ ಆತ ತನ್ನ ವಾಚ್ ಕೊಟ್ಟು ಅಲ್ಲಿಂದ ಹೋಗಿದ್ದಾರೆ. ವಾಚ್ ಪಡೆದ ಬಳಿಕ ಮಾರಾಟಗಾರ ಆತನ ಕೈತುಂಬಾ ಸಮೋಸಾ ಕೊಟ್ಟು ಕಳುಹಿಸಿದ್ದಾರೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More