ರಾಯ್ ಬರೇಲಿ ಗ್ರೌಂಡ್ ರಿಪೋರ್ಟ್: ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾದರೂ ರಾಹುಲ್ ಗಾಂಧಿಗೆ ಗೆಲುವು ಸುಲಭವಲ್ಲ!

|

Updated on: May 17, 2024 | 10:57 AM

ರಾಹುಲ್ ಒಳ್ಳೆಯ ವ್ಯಕ್ತಿ, ಅದರೆ ಭಾರತವನ್ನು ವಿಕಾಸ ಮಾರ್ಗದಲ್ಲಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ತಾನು ವೋಟು ನೀಡುವುದಾಗಿ ಹಿರಿಯ ವ್ಯಕ್ತಿ ಹೇಳುತ್ತಾರೆ. ಇದೇ ಗ್ರಾಮದ ಒಬ್ಬ ಮಹಿಳೆಯೊಂದಿಗೆ ವರದಿಗಾರ ಮಾತಾಡಿದ್ದು ಅವರು, ಇಂದಿರಾಗಾಂಧಿ ಕಾಲದಲ್ಲಿ ಊರಿಗೆ ನೀರಿನ ನಾಲೆ ಬಂದಿದ್ದು ಅದರಿಂದ ಬಹಳ ಸಹಾಯವಾಗಿದೆ, ಹಾಗಾಗಿ ತಾನು ಕಾಂಗ್ರೆಸ್ ಗೆ ವೋಟು ನೀಡುವುದಾಗಿ ಹೇಳುತ್ತಾರೆ.

ರಾಯ್ ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿ (Rae Bareli) ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ದಿನಗಳಿಂದ ಕಾಂಗ್ರೆಸ್ ಪಕ್ಷದ ಭದ್ರಕೋಟೆ ಅನಿಸಿಕೊಂಡಿದೆ. ಕಳೆದ ಬಾರಿ ಪಕ್ಕದ ಅಮೇಠಿಯಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿ (Rahul Gandhi) ಈ ಬಾರಿ ರಾಯ್ ಬರೇಲಿಯಿಂದ ಕಣಕ್ಕಿಳಿದಿದ್ದಾರೆ. ಅವರ ವಿರುದ್ಧ ಬಿಜೆಪಿ ದಿನೇಶ್ ಪ್ರತಾಪ್ (Dinesh Pratap) ಸ್ಪರ್ಧಿಸುತ್ತಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಇದು ನಿಸ್ಸಂದೇಹವಾಗಿ ಪ್ರತಿಷ್ಠಿತ ಕಣಗಳಲ್ಲಿ ಒಂದು. ಟಿವಿ9 ದೆಹಲಿ ವರದಿಗಾರ ರಾಯ್ ಬರೇಲಿಯಿಂದ ಈ ಗ್ರೌಂಡ್ ರಿಪೋರ್ಟ್ ಕಳಿಸಿದ್ದು, ಕ್ಷೇತ್ರ ಜನರ ಮೂಡ್ ಅರಿಯುವ ಪ್ರಯತ್ನ ಮಾಡಿದ್ದಾರೆ. ಮೊದಲು ಮಾತಾಡಿರುವ ಹಿರಿಯರೊಬ್ಬರು ಇದು ಕಾಂಗ್ರೆಸ್ ಪಕ್ಷದ ನೆಚ್ಚಿನ ಕ್ಷೇತ್ರವಾದರೂ ಅದರ ನಾಯಕರಿಂದ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಸೋನಿಯಾ ಗಾಂಧಿ ಸಂಸದೆಯಾಗಿರುವ ಅವಧಿಯಲ್ಲಿ ಒಂದು ಕಾರ್ಖಾನೆ ಸ್ಥಾಪನೆಗೊಂಡಿದ್ದು ನಿಜ ಅದರೆ ಅದರಲ್ಲಿ ಸ್ಥಳಿಯರಿಗೆ ನೌಕರಿಗಳು ಸಿಕ್ಕಿಲ್ಲ, ರಾಹುಲ್ ಒಳ್ಳೆಯ ವ್ಯಕ್ತಿ, ಅದರೆ ಭಾರತವನ್ನು ವಿಕಾಸ ಮಾರ್ಗದಲ್ಲಿ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ತಾನು ವೋಟು ನೀಡುವುದಾಗಿ ಹೇಳುತ್ತಾರೆ. ಇದೇ ಗ್ರಾಮದ ಒಬ್ಬ ಮಹಿಳೆಯೊಂದಿಗೆ ವರದಿಗಾರ ಮಾತಾಡಿದ್ದು ಅವರು, ಇಂದಿರಾಗಾಂಧಿ ಕಾಲದಲ್ಲಿ ಊರಿಗೆ ನೀರಿನ ನಾಲೆ ಬಂದಿದ್ದು ಅದರಿಂದ ಬಹಳ ಸಹಾಯವಾಗಿದೆ, ಹಾಗಾಗಿ ತಾನು ಕಾಂಗ್ರೆಸ್ ಗೆ ವೋಟು ನೀಡುವುದಾಗಿ ಹೇಳುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:   ರಾತ್ರೋರಾತ್ರಿ ಅಂಬಾನಿ, ಅಡಾನಿ ಬಯ್ಯೋದು ನಿಲ್ಲಿಸಿದ್ರಿ; ಎಷ್ಟು ಕಪ್ಪುಹಣ ತಗೊಂಡ್ರಿ?: ರಾಹುಲ್ ಗಾಂಧಿಗೆ ಮೋದಿ ಪ್ರಶ್ನೆ

Follow us on