Vegetable prices: ತರಕಾರಿ ಬೆಲೆಯೇರಿಕೆ ಕೇವಲ ಗ್ರಾಹಕರಿಗಷ್ಟೇ ಅಲ್ಲ ವ್ಯಾಪಾರಿಗಳಿಗೂ ತಲೆಬಿಸಿ ಮಾಡಿದೆ

ಅರುಣ್​ ಕುಮಾರ್​ ಬೆಳ್ಳಿ

Updated on: Jun 28, 2023 | 11:42 AM

ಎರಡು ಮೂರು ಮೂಟೆಗಳಷ್ಟು ತರಕಾರಿ ಮಾರುತ್ತಿದ್ದವನು ಬೆಲೆಯೇರಿಕೆಯಿಂದಾಗಿ ಅರ್ಧ ಮೂಟೆ ಮಾರುವುದು ಕೂಡ ಕಷ್ಟವಾಗುತ್ತಿದೆ ಎಂದು ವ್ಯಾಪಾರಿಯೊಬ್ಬರು ಹೇಳುತ್ತಾರೆ.

ಬೆಂಗಳೂರು: ತರಕಾರಿ, ಕಾಯಿಪಲ್ಯಗಳ ಬೆಲೆಯಲ್ಲಿ (vegetable price) ವಿಪರೀತ ಹೆಚ್ಚಳವಾಗಿದ್ದು ಜನಸಾಮಾನ್ಯರ ಬಜೆಟ್ ಅಸ್ತವ್ಯಸ್ತಗೊಂಡಿದೆ. ಕೊಳ್ಳುವವರು ಬಿಡಿ, ತರಕಾರಿ ಮಾರುವವರು ಸಹ ಸರ್ಕಾರವನ್ನು ಮನಬಂದಂತೆ ತೆಗಳುತ್ತಿದ್ದಾರೆ. ನಗರದ ಹೊರವಲಯಲದ ಗ್ರಾಮವೊಂದರಿಂದ ಬೆಳಗಿನ ಜಾವ 3 ಗಂಟೆಗೆ ಕೆಆರ್ ಮಾರ್ಕೆಟ್ ಗೆ (KR Market) ತರಕಾರಿ ಹೊತ್ತು ತಂದು ಸಗಟು ಬೆಲೆಯಲ್ಲಿ (wholesale price) ಮಾರುವ ಈ ರೈತ, ಯಾವ ಸರ್ಕಾರ ಬಂದರೂ ರೈತರ ಮತ್ತು ಜನಸಾಮಾನ್ಯರ ಗೋಳು ತಪ್ಪಿದ್ದಲ್ಲ ಎಂದು ಹೇಳುತ್ತಾರೆ. ಟಿವಿ9 ಕನ್ನಡ ವಾಹಿನಿಯ ವರದಿಗಾರನೊಂದಿಗೆ ಮಾತಾಡಿರುವ ಇವರು, ರೈತನನ್ನು ದೇಶದ ಬೆನ್ನೆಲುಬು, ಅನ್ನದಾತ ಅಂತ ಹೇಳಿದ್ದಷ್ಟೇ ಬಂತು, ಅವನ ಸಂಕಷ್ಟ ಸರ್ಕಾರಗಳು ಅರ್ಥಮಾಡಿಕೊಳ್ಳಲಾರವು ಎಂದು ಹೇಳುತ್ತಾರೆ. ಕಾಂಗ್ರೆಸ್ ಸರ್ಕಾರ ನೀಡಿರುವ ಗ್ಯಾರಂಟಿಗಳು ಜಾರಿಗೊಳ್ಳಬೇಕಾದರೆ ಒಂದು ವರ್ಷ ಹಿಡಿಯುತ್ತೆ ಎಂದು ಅವರು ಹೇಳುತ್ತಾರೆ. ಕೆಂಪು ಅಂಗಿ ತೊಟ್ಟು ತರಕಾರಿ ಮಾರುತ್ತಿರುವ ಈ ವ್ಯಾಪಾರಿ, ಎರಡು ಮೂರು ಮೂಟೆಗಳಷ್ಟು ತರಕಾರಿ ಮಾರುತ್ತಿದ್ದವನು ಬೆಲೆಯೇರಿಕೆಯಿಂದಾಗಿ ಅರ್ಧ ಮೂಟೆ ಮಾರುವುದು ಕೂಡ ಕಷ್ಟವಾಗುತ್ತಿದೆ ಎನ್ನುತ್ತಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.