ಆಟೋಚಾಲಕರಿಗೆ ಖಾಸಗಿ ಸಾರಿಗೆ ಒಕ್ಕೂಟ ಕರೆದಿರುವ ಮುಷ್ಕರದಲ್ಲಿ ಪಾಲ್ಗೊಳ್ಳದಿದ್ದರೂ ಕಷ್ಟ!

ಅರುಣ್​ ಕುಮಾರ್​ ಬೆಳ್ಳಿ

Updated on: Sep 11, 2023 | 10:45 AM

ಪಾಪ, ಅವರ ಕಷ್ಟ ಏನೋ ಯಾರಿಗ್ಗೊತ್ತು? ಆಟೋರಿಕ್ಷಾ ಚಾಲಕರ ಬದುಕು ನಡೆಯಬೇಕಾದರೆ ಪ್ರತಿದಿನ ಆಟೋ ಓಡಿಸಲೇಬೇಕು. ಮಕ್ಕಳ ಫೀಸು, ಮನೆಯಲ್ಲಿ ವೃದ್ಧ ತಂದೆ ತಾಯಿಗಳಿದ್ದರೆ ಔಷಧಿ, ಚಿಕ್ಕಮಕ್ಕಳಿಗೆ ಹಾಲು-ಎಲ್ಲದಕ್ಕೂ ಚಾಲಕರ ದೈನಂದಿನ ಸಂಪಾದನೆಯೇ ಆಸರೆ. ಎದುರಾಗಿರುವ ಕಷ್ಟಕ್ಕಾಗಿ ಪ್ರತಿಭಟನೆ ಮಾಡಬೇಕು, ಪ್ರತಿಭಟನೆಗಿಳಿಯದಿದ್ದರೆ ಎದುರಾಗುವ ಕಷ್ಟ ಅನುಭವಿಸಬೇಕು.

ಬೆಂಗಳೂರು: ನಗರದಲ್ಲಿ ಇಂದು ಖಾಸಗಿ ಸಾರಿಗೆ ಒಕ್ಕೂಟವು (Karnataka State Private Transport Associations) ಶಕ್ತಿ ಯೋಜನೆ (Shakti Scheme) ಜಾರಿಗೊಳಿಸಿದಾಗಿನಿಂದ ತಮಗಾಗುತ್ತಿರುವ ನಷ್ಟ ಮತ್ತು ಸಮಸ್ಯೆಗಳನ್ನು ರಾಜ್ಯ ಸರ್ಕಾರದ (Siddaramaiah government) ಗಮನಕ್ಕೆ ತರಲು ಪ್ರತಿಭಟನೆಗೆ ಕರೆದಿರುವುದು ನಿನ್ನೆ ವರದಿಯಾಗಿದೆ. ಆಟೋ ರಿಕ್ಷಾ ಚಾಲಕರು, ಌಪ್ ಅಗ್ರಿಗೇಟ್ ಕ್ಯಾಬ್ ಗಳ ಮಾಲೀಕರು, ಖಾಸಗಿ ಬಸ್ ಗಳ ಚಾಲಕರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಆದರೆ, ಇಲ್ಲೊಬ್ಬ ಆಟೋ ಚಾಲಕ ಪ್ರತಿಭಟನೆ ಹೊರತಾಗಿಯೂ ತಮ್ಮ ವಾಹನದಲ್ಲಿ ಸವಾರಿ ಹಾಕಿಕೊಂಡು ಹೋಗುತ್ತಿರುವುದನನ್ನು ಕಂಡ ಪ್ರತಿಭಟನಾನಿರತರು, ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಪ, ಅವರ ಕಷ್ಟ ಏನೋ ಯಾರಿಗ್ಗೊತ್ತು? ಆಟೋರಿಕ್ಷಾ ಚಾಲಕರ ಬದುಕು ನಡೆಯಬೇಕಾದರೆ ಪ್ರತಿದಿನ ಆಟೋ ಓಡಿಸಲೇಬೇಕು. ಮಕ್ಕಳ ಫೀಸು, ಮನೆಯಲ್ಲಿ ವೃದ್ಧ ತಂದೆ ತಾಯಿಗಳಿದ್ದರೆ ಔಷಧಿ, ಚಿಕ್ಕಮಕ್ಕಳಿಗೆ ಹಾಲು-ಎಲ್ಲದಕ್ಕೂ ಚಾಲಕರ ದೈನಂದಿನ ಸಂಪಾದನೆಯೇ ಆಸರೆ. ಎದುರಾಗಿರುವ ಕಷ್ಟಕ್ಕಾಗಿ ಪ್ರತಿಭಟನೆ ಮಾಡಬೇಕು, ಪ್ರತಿಭಟನೆಗಿಳಿಯದಿದ್ದರೆ ಎದುರಾಗುವ ಕಷ್ಟ ಅನುಭವಿಸಬೇಕು. ಅಡಕತ್ತರಿಯಲ್ಲಿ ಸಿಕ್ಕಂಥ ಸ್ಥಿತಿ!

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.