Video: ರೈಲಿನಲ್ಲಿ ಪ್ರಯಾಣಿಸುತ್ತಿರುವಾಗ ಜಾರಿದ ವ್ಯಕ್ತಿಯ ದವಡೆ

Updated on: Oct 19, 2025 | 11:05 AM

ಕನ್ಯಾಕುಮಾರಿ-ದಿಬ್ರುಗಢ ವಿವೇಕ್ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ದವಡೆ ಏಕಾಏಕಿ ಜಾರಿರುವ ಘಟನೆ ಪಾಲಕ್ಕಾಡ್ ಜಂಕ್ಷನ್​ನಲ್ಲಿ ನಡೆದಿದೆ. ಕೂಡಲೇ ರೈಲ್ವೆ ವೈದ್ಯರು ಆಗಮಿಸಿ ಸೂಕ್ತ ಚಿಕಿತ್ಸೆ ನೀಡಿದರು.ಪಾಲಕ್ಕಾಡ್ ರೈಲ್ವೆ ಆಸ್ಪತ್ರೆಯ ವಿಭಾಗೀಯ ವೈದ್ಯಾಧಿಕಾರಿ (DMO) ಡಾ. ಜಿತಿನ್ ಪಿಎಸ್ ಅವರು ನಿಲ್ದಾಣಕ್ಕೆ ತಲುಪಿ ಸ್ವಲ್ಪ ಸಮಯದಲ್ಲೇ ಪ್ರಯಾಣಿಕನಿಗೆ ಚಿಕಿತ್ಸೆ ನೀಡಿದರು. ಪ್ರಯಾಣಿಕನ ಸ್ಥಿತಿ ಸ್ಥಿರವಾಗಿದೆ. ಪ್ರಯಾಣಿಕರೊಬ್ಬರಿಗೆ ಏಕಾಏಕಿ ದವಡೆಯ ಮೂಳೆ ಮುರಿತ ಉಂಟಾಗಿತ್ತು. ಪ್ರಮುಖ ರೈಲು ನಿಲ್ದಾಣಗಳಲ್ಲಿ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಇರುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.

ಕನ್ಯಾಕುಮಾರಿ-ದಿಬ್ರುಗಢ ವಿವೇಕ್ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರ ದವಡೆ ಏಕಾಏಕಿ ಜಾರಿರುವ ಘಟನೆ ಪಾಲಕ್ಕಾಡ್ ಜಂಕ್ಷನ್​ನಲ್ಲಿ ನಡೆದಿದೆ. ಕೂಡಲೇ ರೈಲ್ವೆ ವೈದ್ಯರು ಆಗಮಿಸಿ ಸೂಕ್ತ ಚಿಕಿತ್ಸೆ ನೀಡಿದರು.ಪಾಲಕ್ಕಾಡ್ ರೈಲ್ವೆ ಆಸ್ಪತ್ರೆಯ ವಿಭಾಗೀಯ ವೈದ್ಯಾಧಿಕಾರಿ (DMO) ಡಾ. ಜಿತಿನ್ ಪಿಎಸ್ ಅವರು ನಿಲ್ದಾಣಕ್ಕೆ ತಲುಪಿ ಸ್ವಲ್ಪ ಸಮಯದಲ್ಲೇ ಪ್ರಯಾಣಿಕನಿಗೆ ಚಿಕಿತ್ಸೆ ನೀಡಿದರು. ಪ್ರಯಾಣಿಕನ ಸ್ಥಿತಿ ಸ್ಥಿರವಾಗಿದೆ. ಪ್ರಯಾಣಿಕರೊಬ್ಬರಿಗೆ ಏಕಾಏಕಿ ದವಡೆಯ ಮೂಳೆ ಮುರಿತ ಉಂಟಾಗಿತ್ತು. ಪ್ರಮುಖ ರೈಲು ನಿಲ್ದಾಣಗಳಲ್ಲಿ ತರಬೇತಿ ಪಡೆದ ವೈದ್ಯಕೀಯ ಸಿಬ್ಬಂದಿ ಇರುವುದು ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More