ಪವಿತ್ರಾ ಗೌಡರನ್ನು ಭೇಟಿಯಾಗಲು ಜೈಲಿಗೆ ಬಂದ ವಕೀಲ ನ್ಯಾಯಾಂಗ ಕಸ್ಟಡಿ ಬಗ್ಗೆ ಉಪನ್ಯಾಸ ನೀಡಿದರು!

ಅರುಣ್​ ಕುಮಾರ್​ ಬೆಳ್ಳಿ

Updated on: Jun 29, 2024 | 8:35 PM

ತಾನೇನೂ ಮಾಡಿಲ್ಲ ಆದರೂ ತನಗ್ಯಾಕೆ ಇಂಥ ಸ್ಥಿತಿಯೆಂಬ ಶಾಕ್ ನಲ್ಲಿ ಪವಿತ್ರಾ ಗೌಡ ಇದ್ದಾರೆ, ಅವರ ಜಾಮೀನು ಅರ್ಜು ಸಲ್ಲಿಸುವುದು ಯಾವಾಗ ಅಂತ ಚರ್ಚೆ ಮಾಡಲು ಜೈಲಿಗೆ ಬಂದಿದ್ದು ಅಂತ ವಕೀಲ ನಾರಾಯಣ ಸ್ವಾಮಿ ಹೇಳುತ್ತಾರೆ. ಅದು ಸರಿ; ಆದರೆ ಅವರು ನ್ಯಾಯಾಂಗ ಕಸ್ಟಡಿ ಅಂದರೇನು, ಆರೋಪಿಗಳನ್ನು ಹೇಗೆ ನೋಡಿಕೊಳ್ಳಲಾಗುತ್ತದೆ ಮೊದಲಾದ ಸಂಗತಿಗಳ ಬಗ್ಗೆ ಉಪನ್ಯಾಸ ಯಾಕೆ ನೀಡಿದರು ಅನ್ನೋದು ಗೊತ್ತಾಗಲಿಲ್ಲ!

ಆನೇಕಲ್ (ಬೆಂಗಳೂರು): ಇದ್ದಕ್ಕಿದ್ದಂತೆ ತನ್ನ ಕಕ್ಷಿದಾರಳು ಪವಿತ್ರಾ ಗೌಡರನ್ನು ಭೇಟಿಯಾಲು ಬಂದಿದ್ದ ಅವರ ವಕೀಲ ನಾರಾಯಣಸ್ವಾಮಿ ಹೊರಬಂದ ನಂತರ ಮಾಧ್ಯಮಗಳೊಂದಿಗೆ ಮಾತಾಡಿದರು. ತನ್ನ ಕಕ್ಷಿದಾರೆ ನ್ಯಾಯಾಂಗ ಬಂಧನದಲ್ಲಿದ್ದಾರೆ, ಈ ಕಸ್ಟಡಿಯಲ್ಲಿ ಬೇರೆಯವರನ್ನು ಹೇಗಿಟ್ಟಿರುತ್ತಾರೋ ಪವಿತ್ರಾ ಗೌಡರನ್ನೂ ಹಾಗೆಯೇ ಇಡಲಾಗಿದೆ, ಅವರಿಗೆ ಬೇರೆ ರೀತಿಯ ಟ್ರೀಟ್ಮೆಂಟ್ ಏನೂ ಸಿಗುತ್ತಿಲ್ಲ ಎಂದು ವಕೀಲ ಹೇಳಿದರು. ನ್ಯಾಯಾಂಗ ಬಂಧನದಲ್ಲಿರುವವರಿಗೆ ತೊಂದರೆ ಕೊಡೋದಿಲ್ಲ, ಅಲ್ಲಿ ಅವರಿಗೆ ಹಿಂಸೆ ನೀಡಲಾಗುತ್ತದೆ, ವಿಚಾರಣೆ ಮಾಡಲಾಗುತ್ತದೆ ಅನ್ನೋದು ಸುಳ್ಳು, ಆರೋಪಿಗಳ ಮನ ಪರಿವರ್ತನೆಯಾಗಲಿ ಎಂಬ ಉದ್ದೇಶದಿಂದ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿರುತ್ತದೆ. ಬೇರೆಯವರಿಗೆ ಕೊಡುವ ಊಟವನ್ನೇ ಅವರಿಗೂ ಕೊಡಲಾಗುತ್ತದೆ, ಮಾಧ್ಯಮಗಳು ವರದಿ ಮಾಡುವ ಹಾಗೆ ಪವಿತ್ರಾ ಗೌಡಗೆ ಬೇರೆ ಊಟವೇನೂ ನೀಡಲ್ಲ ಎಂದು ನಾರಾಯಣಸ್ವಾಮಿ ಹೇಳಿದರು. ಬೇಲ್ ಸಿಗುವವರೆಗೆ ಅಥವಾ ವಿಚಾರಣೆ ಮುಗುಯುವವರೆಗೆ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿಡಲಾಗುತ್ತದೆ ಎಂದು ಅವರು ಹೇಳಿದರು.

 

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  ‘ನನ್ನನ್ನು ಯಾರೂ ಮಾತನಾಡಿಸೋಲ್ಲ’; ಜೈಲಲ್ಲಿ ಪವಿತ್ರಾ ಗೌಡ ಕಣ್ಣೀರು

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.