ಪಿತೃಪಕ್ಷದ ದಿನದಂದು ಏನು ಮಾಡಬೇಕು, ಏನು ಮಾಡಬಾರದು ಗೊತ್ತಾ?

Updated on: Sep 08, 2025 | 6:48 AM

ಪಿತೃಪಕ್ಷವು ವಾರ್ಷಿಕ 15 ದಿನಗಳ ಅವಧಿಯಾಗಿದ್ದು, ಪಿತೃಗಳನ್ನು ಸ್ಮರಿಸುವುದು ಮತ್ತು ಪೂಜಿಸುವುದಾಗಿದೆ. ಈ ಅವಧಿಯಲ್ಲಿ ಶ್ರಾದ್ಧ, ಪಿತೃಗಳಿಗೆ ಅನ್ನ ಮತ್ತು ಬೆಲ್ಲ ನೈವೇದ್ಯ ಮತ್ತು ಅವರ ಫೋಟೋಗೆ ನಮಸ್ಕಾರ ಮಾಡುವುದು ಸೇರಿದಂತೆ ವಿವಿಧ ಕ್ರಿಯೆಗಳನ್ನು ಮಾಡುವುದು ಉತ್ತಮ. ಈ ಕ್ರಿಯೆಗಳಿಂದ ಕುಟುಂಬದ ಸುಖ, ಯಶಸ್ಸು ಮತ್ತು ಸಂತಾನ ಭಾಗ್ಯ ಹೆಚ್ಚಾಗಲಿದೆ.

ಬೆಂಗಳೂರು, ಸೆಪ್ಟೆಂಬರ್​ 08: ಪಿತೃಪಕ್ಷವು ಪ್ರತಿ ವರ್ಷ ಬರುವ 15 ದಿನಗಳ ಪವಿತ್ರ ಅವಧಿ. ಈ ಅವಧಿಯಲ್ಲಿ ಪಿತೃಗಳನ್ನು ಸ್ಮರಿಸುವುದು ಮತ್ತು ಅವರ ಆತ್ಮಕ್ಕೆ ಶಾಂತಿಯನ್ನು ಕೋರುವುದು ಪ್ರಮುಖವಾಗಿದೆ. ಈ ವರ್ಷದ ಪಿತೃಪಕ್ಷವು ಸೆಪ್ಟೆಂಬರ್ 8 ರಿಂದ 21 ರ ವರೆಗೆ ಇರಲಿದೆ. ಪಿತೃಪಕ್ಷದಲ್ಲಿ ಶ್ರಾದ್ಧ ಕರ್ಮಗಳನ್ನು ಮಾಡುವುದು, ಪಿತೃಗಳ ಫೋಟೋಗಳಿಗೆ ನಮಸ್ಕಾರ ಮಾಡುವುದು, ಅನ್ನ ಮತ್ತು ಬೆಲ್ಲವನ್ನು ನೈವೇದ್ಯ ಮಾಡುವುದು, ಮತ್ತು ದಾನ ಮಾಡುವುದು ಮುಂತಾದ ಕ್ರಿಯೆಗಳನ್ನು ಮಾಡಬಹುದು.

Follow Us
Gangadhar Saboji

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More