ಪಿಎಂ ಆವಾಸ್ ಯೋಜನೆಯಿಂದ ಬದಲಾದ ಬದುಕು: ಮಧುರೈನ ಮಹಿಳೆ ಬರೆದ ಪತ್ರ ಹಂಚಿಕೊಂಡ ಪ್ರಧಾನಿ ಮೋದಿ

|

Updated on: Apr 13, 2023 | 8:25 PM

ಆವಾಸ್ ಯೋಜನೆ ಅಡಿಯಲ್ಲಿ ಮನೆ ದೊರೆತ ಹಿನ್ನೆಲೆ ತಮಿಳುನಾಡಿನ ಮಧುರೈ ನಿವಾಸಿ ಎನ್​. ಸುಬ್ಬುಲಕ್ಷ್ಮಿ ಎಂಬವರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವ ಮೂಲಕ ಶ್ಲಾಘಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಜನರ ಕಲ್ಯಾಣಕ್ಕೆ ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಅದರಲ್ಲೂ ಹಲವು ಯೋಜನೆಗಳ ಫಲಾನುಭವಿಗಳು ತಮಗೆ ಹೇಗೆ ಪ್ರಯೋಜನವಾಯಿತು ಎನ್ನುವುದನ್ನು ಸಾಮಾಜಿಕ ತಾಣಗಳ ಮೂಲಕ ವಿವರಿಸುತ್ತಾರೆ. ಅದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ವತಃ ಪರಾಮರ್ಶಿಸಿ, ಸಂದರ್ಭಾನುಸಾರ ಪ್ರಸ್ತಾಪಿಸುತ್ತಾರೆ. ಅದರಂತೆ ಈ ಬಾರಿ ತಮಿಳುನಾಡಿನ ಮಧುರೈ ನಿವಾಸಿ ಎನ್​. ಸುಬ್ಬುಲಕ್ಷ್ಮಿ ಎಂಬವರು ತಮಗೆ ಪ್ರಧಾನಿ ಆವಾಸ್ ಯೋಜನೆ (Awas Yojana) ಮೂಲಕ ಮನೆ ದೊರೆತಿರುವುದಕ್ಕೆ ಸಂತಸ ವ್ಯಕ್ತಪಡಿಸಿ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಪತ್ರ ಮತ್ತು ಮಹಿಳೆಯ ಫೋಟೊವನ್ನು ಪ್ರಧಾನಿ ಮೋದಿ ಟ್ವೀಟ್ ಮೂಲಕ ಹಂಚಿಕೊಂಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published On - 8:25 pm, Thu, 13 April 23

Follow us on