‘ತಮಿಳುನಾಡು ರಾಜಕೀಯವಾಗಿ ಜಾಗೃತಗೊಂಡಿಲ್ಲ’; ಜನಾದೇಶದ ಬಗ್ಗೆ ಪ್ರಕಾಶ್ ರಾಜ್ ಅಸಮಾಧಾನ

Updated on: May 06, 2026 | 12:35 PM

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಯಾರು ಊಹಿಸದ ಫಲಿತಾಂಶ ಬಂದಿದೆ. ಟಿವಿಕೆ ಪಕ್ಷ 108 ಸ್ಥಾನ ಗೆದ್ದಿದೆ. ಜನಾದೇಶದ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಪೋಸ್ಟ್ ಈಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡು ರಾಜಕೀಯವಾಗಿ ಜಾಗೃತಗೊಂಡಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ತಮಿಳುನಾಡಿನಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷ ಸುನಾಮಿಯನ್ನೇ ಸೃಷ್ಟಿಸಿದೆ. ಈ ಜನಾದೇಶಕ್ಕೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದ್ದಾರೆ . ಪ್ರಕಾಶ್ ರಾಜ್ ಈ ಬಗ್ಗೆ ಪೋಸ್ಟ್ ಮಾಡಿದ್ದು, ತಮಿಳುನಾಡು ರಾಜಕೀಯವಾಗಿ ಜಾಗೃತಗೊಂಡಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಮಸ್ಕಾರ ತಮಿಳುನಾಡು. ಈ ಹಿಂದೆ ಕಾಮರಾಜರ್ ಸೋತಿದ್ದರು, ಈಗ ಸ್ಟಾಲಿನ್ ಸೋತಿದ್ದಾರೆ. ಸಮಾಜವು ಕೇವಲ ಸಿನಿಮಾ ತಾರೆಯರ ಅಭಿಮಾನಕ್ಕೆ ಹೆಚ್ಚು ಮಾರು ಹೋಗುತ್ತಿದೆ ಹೊರತು ರಾಜಕೀಯವಾಗಿ ಯೋಚಿಸುತ್ತಿಲ್ಲ’ ಎಂದು ಬರೆದುಕೊಂಡಿದ್ದಾರೆ. ವಿರೋಧ ಪಕ್ಷದಲ್ಲಿ ಇದ್ದವರು ರಾಜಕೀಯವಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಲಿ ಎಂದು ಆಶಿಸಿರೋ ಅವರು, ‘ಚುನಾವಣೆಯಲ್ಲಿ ಗೆದ್ದವರ ಜನಸೇವೆ ಉತ್ತಮವಾಗಿರಲಿ’  ಎಂದು ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us