ಪಾಕ್ ಪರ ಘೋಷಣೆ: ಪತ್ರಕರ್ತರಿಗೆ ಬೈಯ್ದ ಸಂಸದ ನಾಸೀರ್​ಗೆ ನೀರಿಳಿಸಿದ ರಂಗನಾಥ್, ವಿಡಿಯೋ ನೋಡಿ

| Updated By: ಕಿರಣ್ ಹನುಮಂತ್​ ಮಾದಾರ್

Updated on: Feb 28, 2024 | 10:10 PM

ರಾಜ್ಯಸಭಾ ಚುನಾವಣೆ ಗೆಲುವಿನ ಸಂಭ್ರಮದ ವೇಳೆ ವಿಧಾನಸೌಧದ ಲಾಂಜ್​ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಯನ್ನು ನಾಸೀರ್​ ಹುಸೇನ್​ ಬೆಂಬಲಿಗನೊಬ್ಬ 2 ಬಾರಿ ಕೂಗಿದ್ದ. ಈ ಕುರಿತು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ನಡಿ, ನಡಿ ಇಲ್ಲಿಂದ ಎಂದು ಏಕವಚನದಲ್ಲಿಯೇ ಕಿಡಿಕಾರಿದ್ದರು. ಮಾಧ್ಯಮದವರ ಬಳಿ ನಡೆದುಕೊಂಡ ರೀತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬೆಂಗಳೂರು,ಫೆ. 28: ರಾಜ್ಯಸಭಾ ಚುನಾವಣೆ ಫಲಿತಾಂಶ(Rajyasabha Election) ನಿನ್ನೆ(ಫೆ.27) ಘೋಷಣೆಯಾದ ಬೆನ್ನಲ್ಲೇ ವಿಧಾನಸೌಧದ ಆವರಣದಲ್ಲಿಯೇ ದೇಶದ್ರೋಹದ ಘೋಷಣೆ ಮೊಳಗಿತ್ತು. ರಾಜ್ಯಸಭಾ ಚುನಾವಣೆ ಗೆಲುವಿನ ಸಂಭ್ರಮದ ವೇಳೆ ವಿಧಾನಸೌಧದ ಲಾಂಜ್​ನಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಯನ್ನು ನಾಸೀರ್​ ಹುಸೇನ್​ ಬೆಂಬಲಿಗನೊಬ್ಬ 2 ಬಾರಿ ಕೂಗಿದ್ದ. ಈ ಕುರಿತು ಪತ್ರಕರ್ತರು ಪ್ರಶ್ನಿಸಿದ್ದಕ್ಕೆ ನಡಿ, ನಡಿ ಇಲ್ಲಿಂದ ಎಂದು ಏಕವಚನದಲ್ಲಿಯೇ ಕಿಡಿಕಾರಿದ್ದರು. ಮಾಧ್ಯಮದವರ ಬಳಿ ನಡೆದುಕೊಂಡ ರೀತಿಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದೀಗ ಪತ್ರಕರ್ತರಿಗೆ ಬೈಯ್ದಿದ ನಾಸೀರ್ ಹುಸೇನ್​ ಅವರಿಗೆ ರಂಗನಾಥ್ ಅವರು ನೀರಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Follow us on