ರವಿಚಂದ್ರನ್ ಕೊಟ್ಟ ‘ಭರವಸೆ’ ಬಗ್ಗೆ ಎಂಎನ್​ ಕುಮಾರ್​ಗೆ ಭರವಸೆ: ಇತ್ಯರ್ಥವಾಗುತ್ತಾ ವಿವಾದ?

MN Kumar: ಸುದೀಪ್ ಹಾಗೂ ನಿರ್ಮಾಪಕ ಎಂಎನ್ ಕುಮಾರ್ ನಡುವಿನ ವಿವಾದ ಈಗ ರವಿಚಂದ್ರನ್ ಹಾಗೂ ಶಿವಣ್ಣನ ಮನೆ ತಲುಪಿದೆ. ರವಿಚಂದ್ರನ್ ಅವರನ್ನು ಭೇಟಿಯಾಗಿರುವ ಕುಮಾರ್ ಸಮಸ್ಯೆ ಪರಿಹಾರವಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿಚಂದ್ರನ್ ಕೊಟ್ಟ 'ಭರವಸೆ' ಬಗ್ಗೆ ಎಂಎನ್​ ಕುಮಾರ್​ಗೆ ಭರವಸೆ: ಇತ್ಯರ್ಥವಾಗುತ್ತಾ ವಿವಾದ?
|

Updated on: Jul 19, 2023 | 10:32 PM

ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (MN Kumar) ವಿವಾದದ ಚೆಂಡು ಈಗ ರವಿಚಂದ್ರನ್ ಹಾಗೂ ಶಿವರಾಜ್ ಕುಮಾರ್ ಅಂಗಳಕ್ಕೆ ಬಂದಿದೆ. ಶಿವರಾಜ್ ಕುಮಾರ್ ಹಾಗೂ ರವಿಚಂದ್ರನ್ ಇಬ್ಬರನ್ನೂ ಸಹ ಕುಮಾರ್ ಭೇಟಿ ಆಗಿದ್ದು ಸಮಸ್ಯೆಯನ್ನು ಮಾತುಕತೆ ಮೂಲಕ ಬಗೆಹರಿಸಿಕೊಡುವಂತೆ ಮನವಿ ಮಾಡಿದ್ದಾರೆ. ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಎಂಎನ್ ಕುಮಾರ್, ರವಿಚಂದ್ರನ್ ಕೊಟ್ಟಿರುವ ಭರವಸೆ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ತಾವು ರವಿಚಂದ್ರನ್ ಮಾತಿನಂತೆ ನಡೆಯುವುದಾಗಿಯೂ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us