Video: ಪ್ರವಾಹ ಸಂತ್ರಸ್ತರಿಗೆ ಉಚಿತವಾಗಿ ಊಟ ವಿತರಿಸುವಾಗ ದುಡ್ಡು ಕೊಟ್ಟು ಊಟ ಪಡೆದ ಸ್ವಾಭಿಮಾನಿ ಬಾಲಕ

Updated on: Sep 05, 2025 | 12:19 PM

ದೆಹಲಿ, ಎನ್​​ಸಿಆರ್​, ಪಂಜಾಬ್​ನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಮಯದಲ್ಲಿ ಅನೇಕ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.ಆದರೂ ಸ್ವಾಭಿಮಾನವನ್ನು ಕಿಂಚಿತ್ತೂ ಬಿಟ್ಟಿಲ್ಲ ಎಂಬುದಕ್ಕೆ ಈ ಬಾಲಕನೇ ಉದಾಹರಣೆ. ಪ್ರವಾಹ ಸಂತ್ರಸ್ತರಿಗೆ ಉಚಿತವಾಗಿ ಊಟ ವಿತರಿಸಲಾಗುತ್ತಿದ್ದರೂ, ಈ ಬಾಲಕ ತನ್ನ ಕೈಯಲ್ಲಿರುವಷ್ಟು ಹಣವನ್ನು ಕೊಟ್ಟು ಊಟವನ್ನು ಪಡೆದಿರುವ ವಿಡಿಯೋ ನೋಡಿ ಖುಷಿಯಾಗದೆ ಇರದು. ಎಂಥಾ ಪರಿಸ್ಥಿತಿಯಲ್ಲೂ ಕೂಡ ಈ ಬಾಲಕ ಬೇರೊಬ್ಬರ ಬಳಿ ಕೈಚಾಚುವುದಿಲ್ಲ ಎಂಬುದಕ್ಕೆ ಇದೇ ನಿದರ್ಶನ.

ಪಂಜಾಬ್, ಸೆಪ್ಟೆಂಬರ್ 05: ದೆಹಲಿ, ಎನ್​​ಸಿಆರ್​, ಪಂಜಾಬ್ನಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಯದಲ್ಲಿ ಅನೇಕ ಮಂದಿ ತಮ್ಮ ಮನೆಗಳನ್ನು ಕಳೆದುಕೊಂಡು  ನಿರಾಶ್ರಿತರಾಗಿದ್ದಾರೆ. ನಿರಾಶ್ರಿತರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ. ಆದರೂ ಸ್ವಾಭಿಮಾನವನ್ನು ಕಿಂಚಿತ್ತೂ ಬಿಟ್ಟಿಲ್ಲ ಎಂಬುದಕ್ಕೆ ಬಾಲಕನೇ ಉದಾಹರಣೆ. ಪ್ರವಾಹ ಸಂತ್ರಸ್ತರಿಗೆ ಉಚಿತವಾಗಿ ಊಟ ವಿತರಿಸಲಾಗುತ್ತಿದ್ದರೂ, ಬಾಲಕ ತನ್ನ ಕೈಯಲ್ಲಿರುವಷ್ಟು ಹಣವನ್ನು ಕೊಟ್ಟು ಊಟವನ್ನು ಪಡೆದಿರುವ ವಿಡಿಯೋ ನೋಡಿ ಖುಷಿಯಾಗದೆ ಇರದು. ಎಂಥಾ ಪರಿಸ್ಥಿತಿಯಲ್ಲೂ ಕೂಡ ಬಾಲಕ ಬೇರೊಬ್ಬರ ಬಳಿ ಕೈಚಾಚುವುದಿಲ್ಲ ಎಂಬುದಕ್ಕೆ ಇದೇ ನಿದರ್ಶನ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us