ಭಾರತ್ ಜೋಡೋ ಯಾತ್ರೆಯಲ್ಲಿ ಎಲ್ಲ ಧರ್ಮಗಳ ಪ್ರಾರ್ಥನಾ ಸ್ಥಳಗಳಿಗೆ ಭೇಟಿ ನೀಡುತ್ತಿರುವ ರಾಹುಲ್ ಗಾಂಧಿ
ನಗರದಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಜೊತೆ ಆಜಂ ಮಸೀದಿಗೆ ತೆರಳಿದ್ದ ರಾಹುಲ್ ನಂತರ ಮಸೀದಿ ಪಕ್ಕದಲ್ಲೇ ಇರುವ ಕೆಥೋಲಿಕ್ ಚರ್ಚ್ ಗೂ ಭೇಟಿ ನೀಡಿದರು.
ಮೈಸೂರು: ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಅಭಿಯಾನಾದ ಕರ್ನಾಟಕ ಲೆಗ್ ನ 4ನೇ ದಿನವಾಗಿರುವ ಸೋಮವಾರ ರಾಹುಲ್ ಗಾಂಧಿ (Rahul Gandhi), ಸಿದ್ದರಾಮಯ್ಯ (Siddaramaiah) ಮತ್ತು ಪಕ್ಷದ ಸಾವಿರಾರು ಕಾರ್ಯಕರ್ತರು ಮೈಸೂರಲ್ಲಿ ಪಾದಯಾತ್ರೆ ಮುಂದುವರಿಸಿದರು. ಈ ಅಭಿಯಾನದಲ್ಲಿ ರಾಹುಲ್, ದೇವಸ್ಥಾನಗಳ ಜೊತೆಗೆ ಮಸೀದಿ ಮತ್ತು ಚರ್ಚ್ಗಳಿಗೂ ಭೇಟಿ ನೀಡುತ್ತಿದ್ದಾರೆ. ನಗರದಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ (Tanveer Sait) ಜೊತೆ ಆಜಂ ಮಸೀದಿಗೆ ತೆರಳಿದ್ದ ಅವರು ನಂತರ ಮಸೀದಿ ಪಕ್ಕದಲ್ಲೇ ಇರುವ ಸೆಂಟ್ ಫಿಲೋಮಿನಾಸ್ ಕೆಥಿಡ್ರಲ್ಗೂ ಭೇಟಿ ನೀಡಿದರು.
Loading...
Unable to load recommendations.
Follow Us
