ರಾಯಚೂರು: ಚಂದ್ರಯಾನ 3ರ ಯಶಸ್ಸಿಗಾಗಿ ಚಂದ್ರಶೇಖರನಿಗೆ ಹಾಲಿನ ಅಭಿಷೇಕ ಮಾಡಿದ ಮಕ್ಕಳು

Edited By:

Updated on: Aug 23, 2023 | 10:11 AM

Chandrayaan-3: ರಾಯಚೂರು ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಚಂದ್ರಯಾನ 3 ಯಶಸ್ಸಿಗಾಗಿ ಮಕ್ಕಳು ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಕ್ಕಳು ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಿ ಚಂದ್ರಯಾನ-3 ಸಕ್ಸಸ್ ಗಾಗಿ ಪ್ರಾರ್ಥಿನಿಸಿದ್ದಾರೆ. ವಿವಿಧ ಸ್ತೋತ್ರಗಳನ್ನ ಹೇಳೋ ಮೂಲಕ ಚಂದ್ರಯಾನ-3 ಭಾರತ ಹೊಸ ಮೈಲು ಗಲ್ಲು ಸಾಧಿಸಲಿ. ಅತೀ ದೊಡ್ಡ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿ ಅಂತ ಪ್ರಾರ್ಥನೆ ಮಾಡಿದ್ದಾರೆ.

ರಾಯಚೂರು, ಆ.23: ಇಡೀ ದೇಶವೇ ಕಾಯುತ್ತಿರುವ ಕ್ಷಣ ಸಮೀಪಿಸುತ್ತಿದೆ. ಇಂದು ಸಂಜೆ ವಿಕ್ರಮ್ ಲ್ಯಾಂಡರ್ ಚಂದ್ರನ ನೆಲದ ಮೇಲೆ ಇಳಿಯಲಿದೆ. ಹೀಗಾಗಿ ಚಂದ್ರಯಾನ್ 3 ಯಶಸ್ಸಿಗಾಗಿ ದೇಶಾದ್ಯಂತ ಮಂದಿರ-ಮಸೀದಿಗಳಲ್ಲಿ ಪೂಜೆ ನಡೆಯುತ್ತಿದೆ. ಸದ್ಯ ರಾಯಚೂರು ನಗರದ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಚಂದ್ರಯಾನ 3 ಯಶಸ್ಸಿಗಾಗಿ ಮಕ್ಕಳು ಶಿವಲಿಂಗಕ್ಕೆ ಅಭಿಷೇಕ ಮಾಡಿದ್ದಾರೆ.

ವಿವಿಧ ಏರಿಯಾಗಳ ಮಕ್ಕಳು ಒಂದಾಗಿ ಚಂದ್ರಯಾನ 3 ಸಕ್ಸಸ್​ಗಾಗಿ ಚಂದ್ರಶೇಖರನಿಗೆ ಪೂಜೆ-ಪುನಸ್ಕಾರ ಮಾಡಿ ಹಾಲಿನ ಅಭಿಷೇಕ ಮಾಡಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಮಕ್ಕಳು ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಿ ಚಂದ್ರಯಾನ-3 ಸಕ್ಸಸ್ ಗಾಗಿ ಪ್ರಾರ್ಥಿನಿಸಿದ್ದಾರೆ. ವಿವಿಧ ಸ್ತೋತ್ರಗಳನ್ನ ಹೇಳೋ ಮೂಲಕ ಚಂದ್ರಯಾನ-3 ಭಾರತ ಹೊಸ ಮೈಲು ಗಲ್ಲು ಸಾಧಿಸಲಿ. ಅತೀ ದೊಡ್ಡ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿ ಅಂತ ಪ್ರಾರ್ಥನೆ ಮಾಡಿದ್ದಾರೆ.

Published on: Aug 23, 2023 10:09 AM
Follow Us
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More