ಸಚಿವರ ಸಭೆಯಲ್ಲಿ ಕ್ರಿಕೆಟ್ ಕ್ರೇಜ್​​: ಕದ್ದು ಮುಚ್ಚಿ ಮೊಬೈಲ್​ನಲ್ಲಿ ಸ್ಕೋರ್ ವೀಕ್ಷಿಸಿದ ಅಧಿಕಾರಿ

Edited By:

Updated on: Nov 15, 2023 | 4:03 PM

Raichur: ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಬೋಸರಾಜ್​ ಬರ ಪರಿಶೀಲನಾ ಸಭೆ ಮಾಡಿದ್ದಾರೆ. ಈ ವೇಳೆ ಸಭೆಯಲ್ಲಿ ಇಂಜಿನಿಯರ್ ನವೀನ್​ ಎನ್ನುವವರಿಂದ ಪದೇ ಪದೇ ಕದ್ದು ಮುಚ್ಚಿ ಮೊಬೈಲ್ ಓಪನ್ ಮಾಡಿ ಸ್ಕೋರ್ ವೀಕ್ಷಣೆ ಮಾಡಿದ್ದಾರೆ. 

ರಾಯಚೂರು, ನವೆಂಬರ್​​​ 15: ಇಂದು ಇಂಡಿಯಾ ಮತ್ತು ನ್ಯೂಜಿಲ್ಯಾಂಡ್ (India vs new zealand) ಸೆಮಿ ಫೈನಲ್ ಪಂದ್ಯ ನಡೆಯುತ್ತಿದೆ. ಈ ಸೆಮಿ ಫೈನಲ್​ನ ಪಂದ್ಯ ಎಷ್ಟರ ಮಟ್ಟಿಗೆ ಕುತೂಹಲ ಕೆರಳಿಸಿದೆ ಎಂದರೆ ಸಚಿವರ ಕೃಷಿ ಮೀಟಿಂಗ್​​ನಲ್ಲಿ ಅಧಿಕಾರಿಯೊಬ್ಬರು ಮೊಬೈಲ್​ನಲ್ಲಿ ಕ್ರಿಕೆಟ್ ಮ್ಯಾಚ್ ಸ್ಕೋರ್ ವೀಕ್ಷಣೆ ಮಾಡಿದ್ದಾರೆ.  ರಾಯಚೂರು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣ ಪ್ರಕಾಶ್ ಪಾಟೀಲ್ ಹಾಗೂ ಸಚಿವ ಎನ್ ಎಸ್ ಬೋಸರಾಜ್​ ಬರ ಪರಿಶೀಲನಾ ಸಭೆ ಮಾಡಿದ್ದಾರೆ. ಈ ವೇಳೆ ಸಭೆಯಲ್ಲಿ ಇಂಜಿನಿಯರ್ ನವೀನ್​ ಎನ್ನುವವರಿಂದ ಪದೇ ಪದೇ ಕದ್ದು ಮುಚ್ಚಿ ಮೊಬೈಲ್ ಓಪನ್ ಮಾಡಿ ಸ್ಕೋರ್ ವೀಕ್ಷಣೆ ಮಾಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Bhemesh Poojar

ಕಳೆದ 10 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.ಈ ಹಿಂದೆ ಬೆಂಗಳೂರು ನಗರದಲ್ಲಿ ಕ್ರೈಂ ರಿಪೋರ್ಟರ್ ಆಗಿ ಎಂಟು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದೇನೆ.ಟಿವಿ9 ಸಂಸ್ಥೆಯಲ್ಲಿ ಕಳೆದ ಎರಡು ವರ್ಷಗಳಿಂದ ರಾಯಚೂರು ಜಿಲ್ಲಾ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ನನ್ನ ಹವ್ಯಾಸ ಕ್ರಿಕೆಟ್ ಆಡುವುದು.

Read More