ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ: ರಮೇಶ್ ಅರವಿಂದ್ ಹೇಳಿದ್ದು ಹೀಗೆ

|

Updated on: Sep 06, 2024 | 2:47 PM

ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಯರೆಡೆ ಅಸಮಾನತೆ ಕುರಿತು ನಡೆಯುತ್ತಿರುವ ಚರ್ಚೆಗಳ ಬಗ್ಗೆ ಮಾತನಾಡಿದ ನಟ ರಮೇಶ್ ಅರವಿಂದ್, ಯಾರಿಗೇ ಆಗಲಿ ಅಗತ್ಯ ಗೌರವಗಳನ್ನು ನೀಡಲೇ ಬೇಕು, ಅದರ ಜೊತೆಗೆ ಒಂದೊಮ್ಮೆ ಚಿತ್ರರಂಗದಲ್ಲಿ ಯಾರಿಂದಾದರೂ ಸಮಸ್ಯೆ ಆಗಿದ್ದರೆ ಪ್ರತಿಭಟಿಸೋಣ ಆದರೆ ಇಡೀ ಚಿತ್ರರಂಗವನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದಿದ್ದಾರೆ.

ಚಿತ್ರರಂಗ ಮಾತ್ರವೇ ಎಂದಲ್ಲ ಯಾವುದೇ ಕ್ಷೇತ್ರದಲ್ಲಾದರೂ ಯಾರಿಗೇ ಆದರೂ ಕೊಡಬೇಕಾದ ಅಗತ್ಯ ಗೌರವ ಕೊಡಲೇ ಬೇಕು. ಅವರಿಗೆ ಇರುವ ಪ್ರತಿಭೆಗೆ ಸೂಕ್ತ ಬೆಲೆ ಕೊಡಲೇ ಬೇಕು. ಆತ್ಮಗೌರವಕ್ಕೆ ನಾವು ಗೌರವಿಸಲೇ ಬೇಕು. ಚಿತ್ರರಂಗ ಮಾತ್ರ ಎಂದಲ್ಲ ಇದು ಎಲ್ಲ ಕ್ಷೇತ್ರದಲ್ಲಿಯೂ ಇರಲೇ ಬೇಕು. ಯಾವುದೇ ಕ್ಷೇತ್ರದಲ್ಲಾಗಲಿ ಮಹಿಳೆಯರು ಸಮಾನ ಕೊಡುಗೆ ನೀಡಿಯೇ ಇರುತ್ತಾರೆ. ಒಂದೊಮ್ಮೆ ಆ ಕೊಡಬೇಕಾದ ಗೌರವ ಮಹಿಳೆಯರಿಗೆ ಕೊಡಲಾಗಿಲ್ಲ ಎಂದಾದರೆ ಅದನ್ನು ಕೇಳುವುದರಲ್ಲಿ ತಪ್ಪಿಲ್ಲ, ಅದಕ್ಕೆ ನಮ್ಮ ಬೆಂಬಲವೂ ಇದೆ. ಆದರೆ ಸಮಸ್ಯೆ ಇರುವುದು ಇಂಥಹಾ ವಿಷಯಗಳು ಬಂದಾಗ ಇಡೀ ಚಿತ್ರರಂಗವನ್ನು ಒಂದು ತಕ್ಕಡಿಯಲ್ಲಿ ತೂಗುವ ಕಾರ್ಯ ಆಗುತ್ತಿದೆ. ಸಿನಿಮಾ ಎಂಬುದು ಬಹಳ ಅದ್ಭುತವಾದ ಕಲೆ ಅದಕ್ಕೆ ಎಲ್ಲರೂ ಬಹಳ ಕಷ್ಟಪಟ್ಟು ಕೆಲಸ ಮಾಡಿರುತ್ತೇವೆ. ಆದರೆ ಅಲ್ಲಿರುವ ಯಾರೋ ಕೆಲವರಿಂದ ಹೀಗೆ ಆದಾಗ ಇಡೀ ಚಿತ್ರರಂಗವನ್ನು ದೂಷಿಸುವುದು ಮಾತ್ರ ಸರಿಯಲ್ಲ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on