ಒಂದು ಮೊಟ್ಟೆಗೆ ಹೆದರಿದ ಸಿದ್ದರಾಮಯ್ಯ ಪುಕ್ಕಲ, ತಾಕತ್ತಿದ್ದರೆ ಕೊಡಗಿಗೆ ಬರಲಿ: ಅಡ್ಡಂಡ ಕಾರ್ಯಪ್ಪ, ರಂಗಾಯಣ ನಿರ್ದೇಶಕ
144 ಸೆಕ್ಷನ್ ಜಾರಿಗೊಳಿಸಿದ್ದಕ್ಕೆ ಕಾನೂನು ಉಲ್ಲಂಘನೆ ಮಾಡುವುದಿಲ್ಲ ಅಂತ ಪೋಸು ಕೊಟ್ಟು ‘ಕೊಡಗು ಚಲೋ’ ಕಾರ್ಯಕ್ರಮ ರದ್ದುಗೊಳಿಸಿದ ಸಿದ್ದರಾಮಯ್ಯ ಈ ಹಿಂದೆ ಹಲವಾರು ಬಾರಿ ನಿಷೇಧಾಜ್ಞೆ ಉಲ್ಲಂಘಿಸಿದ ಸಂದರ್ಭಗಳಿವೆ ಎಂದು ಕಾರ್ಯಪ್ಪ ಹೇಳಿದರು
ಕೊಡಗು ಮೂಲದ ಮೈಸೂರು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರು (Addanda Cariappa) ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ (Siddaramaiah) ತಾಕತ್ತಿದ್ದರೆ ಕೊಡಗಿಗೆ ಬರುವಂತೆ ಸವಾಲೆಸೆದಿದ್ದಾರೆ. ಒಂದು ಕೋಳಿಮೊಟ್ಟೆಗೆ ಹೆದರುವ ಸಿದ್ದರಾಮಯ್ಯ ಟಿಪ್ಪು ಸುಲ್ತಾನನ (Tipu Sultan) ಹಾಗೆ ಪುಕ್ಕಲ, 144 ಸೆಕ್ಷನ್ ಜಾರಿಗೊಳಿಸಿದ್ದಕ್ಕೆ ಕಾನೂನು ಉಲ್ಲಂಘನೆ ಮಾಡುವುದಿಲ್ಲ ಅಂತ ಪೋಸು ಕೊಟ್ಟು ‘ಕೊಡಗು ಚಲೋ’ ಕಾರ್ಯಕ್ರಮ ರದ್ದುಗೊಳಿಸಿದ ಸಿದ್ದರಾಮಯ್ಯ ಈ ಹಿಂದೆ ಹಲವಾರು ಬಾರಿ ನಿಷೇಧಾಜ್ಞೆ ಉಲ್ಲಂಘಿಸಿದ ಸಂದರ್ಭಗಳಿವೆ ಎಂದು ಕಾರ್ಯಪ್ಪ ಹೇಳಿದರು. ಅವರು ಮಾತಾಡಿರುವ ವಿಡಿಯೋ ಸಾಮಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ..
Loading...
Unable to load recommendations.
Follow Us
