ನನ್ನನ್ನು ರಾಜನಾಗಿ ಮೆರೆಸಿದ್ದು ಹಂಸಲೇಖ: ರವಿಚಂದ್ರನ್

Updated on: Jun 24, 2025 | 5:11 PM

V Ravichandran and Hamsalekha: ಹಂಸಲೇಖ ನಿರ್ದೇಶಿಸುತ್ತಿರುವ ಸಿನಿಮಾದ ಟೈಟಲ್ ಲಾಂಚ್​ಗೆ ತಮ್ಮ ದಶಕಗಳ ಗೆಳೆಯ ರವಿಚಂದ್ರನ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ವೇದಿಕೆ ಮೇಲೆ ತಮ್ಮ ಹಾಗೂ ಹಂಸಲೇಖ ಅವರ ಆತ್ಮೀಯತೆಯ ಬಗ್ಗೆ ಮಾತನಾಡಿದ ರವಿಚಂದ್ರನ್, ‘ನಾನು ತೆರೆಯ ಮೇಲೆ ಮೆರೆದಿದ್ದೇನೆ, ನಾನು ಹಾಗೆ ರಾಜನಂತೆ ಮೆರೆಯುವಂತೆ ಮಾಡಿದ್ದು ಹಂಸಲೇಖ’ ಎಂದರು.

ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ‘ಓಕೆ’ ಎಂದು ಹೆಸರಿಟ್ಟಿದ್ದು, ಸಿನಿಮಾದ ಟೈಟಲ್ ಲಾಂಚ್​ಗೆ ತಮ್ಮ ದಶಕಗಳ ಗೆಳೆಯ ರವಿಚಂದ್ರನ್ ಅವರನ್ನು ಅತಿಥಿಯಾಗಿ ಆಹ್ವಾನಿಸಿದ್ದರು. ವೇದಿಕೆ ಮೇಲೆ ತಮ್ಮ ಹಾಗೂ ಹಂಸಲೇಖ ಅವರ ಆತ್ಮೀಯತೆಯ ಬಗ್ಗೆ ಮಾತನಾಡಿದ ರವಿಚಂದ್ರನ್, ‘ನಾನು ತೆರೆಯ ಮೇಲೆ ಮೆರೆದಿದ್ದೇನೆ, ನಾನು ಹಾಗೆ ರಾಜನಂತೆ ಮೆರೆಯುವಂತೆ ಮಾಡಿದ್ದು ಹಂಸಲೇಖ’ ಎಂದರು. ತಾವು ಹಾಗೂ ಹಂಸಲೇಖ ಒಟ್ಟಿಗೆ ಕೆಲಸ ಮಾಡಿದ ದಿನಗಳನ್ನು ರವಿಚಂದ್ರನ್ ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More