ಡಾ ರಾಜ್​ಕುಮಾರ್ ಗೀತ ನಮನ ಕಾರ್ಯಕ್ರಮದಲ್ಲಿ ಸಾಧು ಕೋಕಿಲ ಮಾತು

Updated on: Apr 24, 2026 | 1:30 PM

Dr Rajkumar Birth anniversary program: ಡಾ ರಾಜ್​ಕುಮಾರ್ ಜಯಂತಿಯಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಾಧು ಕೋಕಿಲ ನಾವೆಲ್ಲ, ಅಣ್ಣಾವ್ರನ್ನು ಒಮ್ಮೆ ಮುಟ್ಟಲು ಕಾಯುತ್ತಿದ್ದೆವು. ಅವರ ಮಾತು, ಅವರ ನಡೆ-ನುಡಿ, ಅವರ ಮೈಕಟ್ಟು ಎಲ್ಲವೂ ಅದ್ಭುತ. ಅವರ ಮೈಯ್ಯಂತೂ ರೇಷ್ಮೆಯಂತೆ ನುಣುಪಾಗಿ ಇರುತ್ತಿತ್ತು ಎಂದು ಸಾಧು ಕೋಕಿಲ ಹೇಳಿದರು. ವಿಡಿಯೋ ನೋಡಿ...

ಡಾ ರಾಜ್​ಕುಮಾರ್ (Dr Rajkumar) ಜಯಂತಿ ನಿಮಿತ್ತ ಗೀತ-ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಜ್​ಕುಮಾರ್ ಕುಟುಂಬದ ಸದಸ್ಯರ ಜೊತೆಗೆ ಶಾಸಕ ಗೋಪಾಲಯ್ಯ ಮತ್ತು ಚಿತ್ರರಂಗದ ಕೆಲ ಗಣ್ಯರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ನಟ ಮತ್ತು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರೂ ಆಗಿರುವ ಸಾಧು ಕೋಕಿಲ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿ ಅಣ್ಣಾವ್ರ ಬಗ್ಗೆ ಮಾತನಾಡಿದರು. ನಾವೆಲ್ಲ, ಅಣ್ಣಾವ್ರನ್ನು ಒಮ್ಮೆ ಮುಟ್ಟಲು ಕಾಯುತ್ತಿದ್ದೆವು. ಅವರ ಮಾತು, ಅವರ ನಡೆ-ನುಡಿ, ಅವರ ಮೈಕಟ್ಟು ಎಲ್ಲವೂ ಅದ್ಭುತ. ಅವರ ಮೈಯ್ಯಂತೂ ರೇಷ್ಮೆಯಂತೆ ನುಣುಪಾಗಿ ಇರುತ್ತಿತ್ತು ಎಂದು ಸಾಧು ಕೋಕಿಲ ಹೇಳಿದರು. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Apr 24, 2026 12:50 PM
Follow Us