‘ಯುವ’ ಚಿತ್ರದ ಕಥೆ ರಿವೀಲ್ ಮಾಡಿದ ಸಂತೋಷ್ ಆನಂದ್​​ರಾಮ್

Updated on: Mar 16, 2024 | 8:11 AM

ಸಂತೋಷ್ ಆನಂದ್​​ರಾಮ್ ಸಿನಿಮಾಗಳಲ್ಲಿ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ‘ರಾಜಕುಮಾರ’ ಸಿನಿಮಾದಲ್ಲಿ ತಂದೆ-ಮಗನ ಭಾವನಾತ್ಮಕ ವಿಚಾರ ಇತ್ತು. ಈಗ ‘ಯುವ’ ಚಿತ್ರದಲ್ಲೂ ಇದೇ ಮಾದರಿಯ ಕಥೆ ಇರಲಿದೆಯಂತೆ. ಈ ಬಗ್ಗೆ ಸಂತೋಷ್ ಆನಂದ್​ರಾಮ್ ಅವರು ಮಾತನಾಡಿದ್ದಾರೆ.

ಸಂತೋಷ್ ಆನಂದ್​​ರಾಮ್ (Santhosh Ananddram) ಸಿನಿಮಾಗಳಲ್ಲಿ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ‘ರಾಜಕುಮಾರ’ ಸಿನಿಮಾದಲ್ಲಿ ತಂದೆ-ಮಗನ ಭಾವನಾತ್ಮಕ ವಿಚಾರ ಇತ್ತು. ಈಗ ‘ಯುವ’ ಚಿತ್ರದಲ್ಲೂ ಇದೇ ಮಾದರಿಯ ಕಥೆ ಇರಲಿದೆಯಂತೆ. ಈ ಬಗ್ಗೆ ಸಂತೋಷ್ ಆನಂದ್​ರಾಮ್ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ಸಿನಿಮಾದ ಹಾಡನ್ನು ಬಿಡುಗಡೆ ಮಾಡಲಾಯಿತು. ಆ ಬಳಿಕ ತಂಡ ಮಾತನಾಡಿದೆ. ‘ಮಕ್ಕಳನ್ನು ಭೂಮಿಗೆ ಪರಿಚಯಿಸೋದು ತಾಯಿ, ಬದುಕಿಗೆ ಪರಿಚಯಿಸೋದು ತಂದೆ. ಇದು ತಂದೆ ಹಾಗೂ ಮಗನ ಕಥೆ. ಇದು ಔಟ್ ಆಫ್ ದಿ ಬಾಕ್ಸ್​ ಕಥೆ ಅಲ್ಲ. ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಮಧ್ಯಮ ವರ್ಗದ ಕಥೆಯನ್ನು ಈ ಚಿತ್ರ ಹೊಂದಿದೆ. ಈಗ ರಿಲೀಸ್ ಆಗಿರೋ ಹಾಡು ತುಂಬಾನೇ ಮುಖ್ಯ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Follow Us
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More